'ಸ್ವಗ್ರಾಮದಲ್ಲಿ ಮನೆ ನಿರ್ಮಿಸುವ ತಯಾರಿ ನಡೆಸಿದ್ದ ಪತಿ ಚಂದ್ರಗೌಡ ಅವರು ಬೆಂಗಳೂರಿನಲ್ಲಿ ಸಾಲ ಮಾಡಿ ಆಟೊ ಖರೀದಿಸಿ ಓಡಿಸುತ್ತಿದ್ದರು. ಕೋವಿಡ್ ಸೋಂಕು ದೃಢಪಟ್ಟ ಮೇಲೆ ಅವರನ್ನು 3 ದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4ನೇ ದಿನ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಆಟೊ ಖರೀದಿಸಿದ ಸಾಲಕ್ಕಾಗಿ ಫೈನಾನ್ಸ್ ಕಂಪನಿಯವರಿಗೆ ಆಟೊ ವಾಪಸ್ ಕೊಟ್ಟಿದ್ದೇವೆ. ಈಗ ಮನೆ ಇಲ್ಲ, ಕೆಲಸವಿಲ್ಲ, ಮುಂದಿನ ದಾರಿ ಕಾಣದಂತಾಗಿದೆʼ ಎಂದು ಪವಿತ್ರಾ ಕಣ್ಣೀರಿಟ್ಟರು.