<p><strong>ಹಿರೇಕೆರೂರ:</strong> ಬೆಂಗಳೂರಿನಲ್ಲಿ ಆಟೊ ಓಡಿಸುತ್ತಿದ್ದ ಪತಿ ಚಂದ್ರಗೌಡ ಅವರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ಸ್ವಗ್ರಾಮ ಕೋಡದಲ್ಲಿ ರಸ್ತೆ ವಿಸ್ತರಣೆಗೆ ಮನೆ ಹಾನಿಯಾಗಿದೆ. ಇಬ್ಬರು ಹೆಣ್ಣು ಮಕ್ಕಳು ತಂದೆ ಇಲ್ಲದೇ ತಬ್ಬಲಿಯಾಗಿವೆ. ನಿಲ್ಲಲು ನೆಲೆ ಇಲ್ಲದೇ ನಮ್ಮ ಬದುಕು ದುಸ್ತರವಾಗಿದೆ ಎಂದು ಪವಿತ್ರಾ ಕಣ್ಣೀರಿಟ್ಟರು.</p>.<p>ತಾಲ್ಲೂಕಿನ ಕೋಡ ಗ್ರಾಮದಿಂದ ಬೆಂಗಳೂರಿಗೆ ಬಂದು ಆಟೊ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಗೌಡ ಹಂಚಿನಮನಿ ಮೇ 1ರಂದು ಕೋವಿಡ್ಗೆ ಬಲಿಯಾಗಿದ್ದಾರೆ. ಅವರ ಪತ್ನಿ ಪವಿತ್ರಾ ಅವರು ವಾಸಕ್ಕೆ ಮನೆ ಇಲ್ಲದೇ ಹರಿಹರ ತಾಲ್ಲೂಕು ಮೂಗಿನಗೊಂದಿ ಗ್ರಾಮದ ತವರು ಮನೆ ಸೇರಿದ್ದಾರೆ.</p>.<p>'ಸ್ವಗ್ರಾಮದಲ್ಲಿ ಮನೆ ನಿರ್ಮಿಸುವ ತಯಾರಿ ನಡೆಸಿದ್ದ ಪತಿ ಚಂದ್ರಗೌಡ ಅವರು ಬೆಂಗಳೂರಿನಲ್ಲಿ ಸಾಲ ಮಾಡಿ ಆಟೊ ಖರೀದಿಸಿ ಓಡಿಸುತ್ತಿದ್ದರು. ಕೋವಿಡ್ ಸೋಂಕು ದೃಢಪಟ್ಟ ಮೇಲೆ ಅವರನ್ನು 3 ದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4ನೇ ದಿನ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಆಟೊ ಖರೀದಿಸಿದ ಸಾಲಕ್ಕಾಗಿ ಫೈನಾನ್ಸ್ ಕಂಪನಿಯವರಿಗೆ ಆಟೊ ವಾಪಸ್ ಕೊಟ್ಟಿದ್ದೇವೆ. ಈಗ ಮನೆ ಇಲ್ಲ, ಕೆಲಸವಿಲ್ಲ, ಮುಂದಿನ ದಾರಿ ಕಾಣದಂತಾಗಿದೆʼ ಎಂದು ಪವಿತ್ರಾ ಕಣ್ಣೀರಿಟ್ಟರು.</p>.<p>9 ವರ್ಷದ ದಾಂಪತ್ಯದಲ್ಲಿ ನಿತ್ಯ ಕಷ್ಟಪಟ್ಟು ದುಡಿದು ಮನೆ ನಿರ್ವಹಣೆ ಮಾಡುತ್ತಿದ್ದರು. ಮನೆ ನಿರ್ಮಿಸುವ ಕನಸು ಕಂಡಿದ್ದರು. ಅದು ನನಸಾಗಲೇ ಇಲ್ಲ, 4 ವರ್ಷದ ಮಗಳು ಮೋಹಿತಾ ಹಾಗೂ 7 ತಿಂಗಳ ಹಸುಗೂಸು ಕೀರ್ತನಾ ಜತೆಗೆ ತವರುಮನೆ ಸೇರಿದ್ದೇನೆ. ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಇನ್ನೂ ಮಂಜೂರಾಗಿಲ್ಲ ಎಂದು ತಿಳಿಸಿದರು.</p>.<p>‘ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡ ಮಗಳ ಜೀವನ ಕಷ್ಟದಲ್ಲಿದೆ. ಇಬ್ಬರು ಸಣ್ಣ ಮಕ್ಕಳನ್ನು ಸಾಕಬೇಕಿದೆ. ಸರ್ಕಾರ ಯಾವುದಾದರೂ ಕೆಲಸ ನೀಡಿ ನೆರವಿಗೆ ಬರಬೇಕು’ ಎಂದು ಪವಿತ್ರಾ ಅವರ ತಂದೆ ಬಸವರಾಜಪ್ಪ ಅಂಗಡಿ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಕೆರೂರ:</strong> ಬೆಂಗಳೂರಿನಲ್ಲಿ ಆಟೊ ಓಡಿಸುತ್ತಿದ್ದ ಪತಿ ಚಂದ್ರಗೌಡ ಅವರು ಕೋವಿಡ್ನಿಂದ ಮೃತಪಟ್ಟಿದ್ದಾರೆ. ಸ್ವಗ್ರಾಮ ಕೋಡದಲ್ಲಿ ರಸ್ತೆ ವಿಸ್ತರಣೆಗೆ ಮನೆ ಹಾನಿಯಾಗಿದೆ. ಇಬ್ಬರು ಹೆಣ್ಣು ಮಕ್ಕಳು ತಂದೆ ಇಲ್ಲದೇ ತಬ್ಬಲಿಯಾಗಿವೆ. ನಿಲ್ಲಲು ನೆಲೆ ಇಲ್ಲದೇ ನಮ್ಮ ಬದುಕು ದುಸ್ತರವಾಗಿದೆ ಎಂದು ಪವಿತ್ರಾ ಕಣ್ಣೀರಿಟ್ಟರು.</p>.<p>ತಾಲ್ಲೂಕಿನ ಕೋಡ ಗ್ರಾಮದಿಂದ ಬೆಂಗಳೂರಿಗೆ ಬಂದು ಆಟೊ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಗೌಡ ಹಂಚಿನಮನಿ ಮೇ 1ರಂದು ಕೋವಿಡ್ಗೆ ಬಲಿಯಾಗಿದ್ದಾರೆ. ಅವರ ಪತ್ನಿ ಪವಿತ್ರಾ ಅವರು ವಾಸಕ್ಕೆ ಮನೆ ಇಲ್ಲದೇ ಹರಿಹರ ತಾಲ್ಲೂಕು ಮೂಗಿನಗೊಂದಿ ಗ್ರಾಮದ ತವರು ಮನೆ ಸೇರಿದ್ದಾರೆ.</p>.<p>'ಸ್ವಗ್ರಾಮದಲ್ಲಿ ಮನೆ ನಿರ್ಮಿಸುವ ತಯಾರಿ ನಡೆಸಿದ್ದ ಪತಿ ಚಂದ್ರಗೌಡ ಅವರು ಬೆಂಗಳೂರಿನಲ್ಲಿ ಸಾಲ ಮಾಡಿ ಆಟೊ ಖರೀದಿಸಿ ಓಡಿಸುತ್ತಿದ್ದರು. ಕೋವಿಡ್ ಸೋಂಕು ದೃಢಪಟ್ಟ ಮೇಲೆ ಅವರನ್ನು 3 ದಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4ನೇ ದಿನ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿಯಿತು. ಆಟೊ ಖರೀದಿಸಿದ ಸಾಲಕ್ಕಾಗಿ ಫೈನಾನ್ಸ್ ಕಂಪನಿಯವರಿಗೆ ಆಟೊ ವಾಪಸ್ ಕೊಟ್ಟಿದ್ದೇವೆ. ಈಗ ಮನೆ ಇಲ್ಲ, ಕೆಲಸವಿಲ್ಲ, ಮುಂದಿನ ದಾರಿ ಕಾಣದಂತಾಗಿದೆʼ ಎಂದು ಪವಿತ್ರಾ ಕಣ್ಣೀರಿಟ್ಟರು.</p>.<p>9 ವರ್ಷದ ದಾಂಪತ್ಯದಲ್ಲಿ ನಿತ್ಯ ಕಷ್ಟಪಟ್ಟು ದುಡಿದು ಮನೆ ನಿರ್ವಹಣೆ ಮಾಡುತ್ತಿದ್ದರು. ಮನೆ ನಿರ್ಮಿಸುವ ಕನಸು ಕಂಡಿದ್ದರು. ಅದು ನನಸಾಗಲೇ ಇಲ್ಲ, 4 ವರ್ಷದ ಮಗಳು ಮೋಹಿತಾ ಹಾಗೂ 7 ತಿಂಗಳ ಹಸುಗೂಸು ಕೀರ್ತನಾ ಜತೆಗೆ ತವರುಮನೆ ಸೇರಿದ್ದೇನೆ. ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಇನ್ನೂ ಮಂಜೂರಾಗಿಲ್ಲ ಎಂದು ತಿಳಿಸಿದರು.</p>.<p>‘ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡ ಮಗಳ ಜೀವನ ಕಷ್ಟದಲ್ಲಿದೆ. ಇಬ್ಬರು ಸಣ್ಣ ಮಕ್ಕಳನ್ನು ಸಾಕಬೇಕಿದೆ. ಸರ್ಕಾರ ಯಾವುದಾದರೂ ಕೆಲಸ ನೀಡಿ ನೆರವಿಗೆ ಬರಬೇಕು’ ಎಂದು ಪವಿತ್ರಾ ಅವರ ತಂದೆ ಬಸವರಾಜಪ್ಪ ಅಂಗಡಿ ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>