ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 101 ಈಡುಗಾಯಿ ಒಡೆದು ಹರಿಕೆ ತೀರಿಸಿದ ಕಾಂಗ್ರೆಸ್ ಕಾರ್ಯಕರ್ತರು

Published 29 ಮೇ 2023, 15:42 IST
Last Updated 29 ಮೇ 2023, 15:42 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ಹಿರೇಮುಗದೂರ ಗ್ರಾಮದ ವೀರಭದ್ರಪ್ಪ ಹಾದಿಮನಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಗರದ ವೀರಭದ್ರೇಶ್ವರ ದೇವಾಲಯಯದಲ್ಲಿ 101 ಈಡುಗಾಯಿ ಒಡೆದು ಭಕ್ತಿಸೇವೆ ಸಮರ್ಪಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ರುದ್ರಪ್ಪ ಲಮಾಣಿ ಅವರು ಗೆಲುವು ಸಾಧಿಸಿದರೆ ನೂರೊಂದು ಈಡುಗಾಯಿ ಸಮರ್ಪಿಸುವುದಾಗಿ ಬೇಡಿಕೊಂಡಿದ್ದರು. ತಮ್ಮ ಪ್ರಾರ್ಥನೆ ಈಡೇರಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ವೀರಭದ್ರೇಶ್ವರ ದೇವರಿಗೆ ಭಕ್ತಿಸೇವೆ ಸಮರ್ಪಿಸಿದರು. ಇದಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ರುದ್ರಪ್ಪ ಲಮಾಣಿ ಅವರೊಂದಿಗೆ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಎಸ್.ಎಫ್.ಎನ್. ಗಾಜಿಗೌಡ್ರ, ಸಂಜೀವಕುಮಾರ ನೀರಲಗಿ, ನಗರ ಸಭೆ ಸದಸ್ಯರಾದ ದಾದಾಫೀರ್ ಚೂಡಿಗಾರ, ವೆಂಕಟೇಶ ಬಿಜಾಪುರ, ಡಾಕೇಶ ಲಮಾಣಿ, ದರ್ಶನ ಲಮಾಣಿ, ರಮೇಶ ಆನವಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT