<p><strong>ಹಾವೇರಿ</strong>: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡಕ್ಕೆ ಬರುತ್ತಿದ್ದು, ಮಾಲತೇಶ ದೇವಸ್ಥಾನದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಪೊಲೀಸರು ಮುಖ್ಯ ಗೇಟ್ ಬಂದ್ ಮಾಡಿದ್ದಾರೆ. </p><p>ಸಂಜೆ 4 ಗಂಟೆಯವರೆಗೂ ದರ್ಶನ ಬಂದ್ ಮಾಡಿರುವುದಾಗಿ ಘೋಷಿಸಲಾಗಿದೆ.</p><p>ಬೆಂಗಳೂರಿನಿಂದ ವಿಮಾನದ ಮೂಲಕ ಮುಖ್ಯಮಂತ್ರಿ ಅವರು ಹುಬ್ಬಳ್ಳಿಗೆ ಬರುತ್ತಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ದೇವರಗುಡ್ಡಕ್ಕೆ ಬರುತ್ತಿದ್ದಾರೆ. </p><p>ಮುಖ್ಯಮಂತ್ರಿ ಬರುವುದು ಗಂಟೆ ತಡವಾಗುವುದಾಗಿ ಜಿಲ್ಲಾಡಳಿತ ಹೇಳಿದೆ. ಇದರ ನಡುವೆಯೇ ದೇವಸ್ಥಾನದ ಪ್ರಮುಖ ಗೇಟ್ ಬಂದ್ ಮಾಡಲಾಗಿದೆ.</p><p>ಇದರಿಂದಾಗಿ ದೇವರ ದರ್ಶನಕ್ಕೆ ಬಂದಿರುವ ಭಕ್ತರು, ಮುಖ್ಯ ಗೇಟ್ ಹೊರಗೆ ಕಾಯುತ್ತ ನಿಂತಿದ್ದಾರೆ. </p><p>'ಇದು ಸುಕ್ಷೇತ್ರ. ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. ಸಿದ್ದರಾಮಯ್ಯ ಬರುವುದು ಇನ್ನು ಒಂದು ಗಂಟೆ ತಡವಾಗಲಿದೆ. ಬೇಗನೇ ಗೇಟ್ ಬಂದ್ ಮಾಡುವುದು ಸರಿಯಲ್ಲ' ಎಂದು ಭಕ್ತರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ ಸುಕ್ಷೇತ್ರ ದೇವರಗುಡ್ಡಕ್ಕೆ ಬರುತ್ತಿದ್ದು, ಮಾಲತೇಶ ದೇವಸ್ಥಾನದಲ್ಲಿ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಪೊಲೀಸರು ಮುಖ್ಯ ಗೇಟ್ ಬಂದ್ ಮಾಡಿದ್ದಾರೆ. </p><p>ಸಂಜೆ 4 ಗಂಟೆಯವರೆಗೂ ದರ್ಶನ ಬಂದ್ ಮಾಡಿರುವುದಾಗಿ ಘೋಷಿಸಲಾಗಿದೆ.</p><p>ಬೆಂಗಳೂರಿನಿಂದ ವಿಮಾನದ ಮೂಲಕ ಮುಖ್ಯಮಂತ್ರಿ ಅವರು ಹುಬ್ಬಳ್ಳಿಗೆ ಬರುತ್ತಿದ್ದು, ಅಲ್ಲಿಂದ ರಸ್ತೆ ಮಾರ್ಗವಾಗಿ ದೇವರಗುಡ್ಡಕ್ಕೆ ಬರುತ್ತಿದ್ದಾರೆ. </p><p>ಮುಖ್ಯಮಂತ್ರಿ ಬರುವುದು ಗಂಟೆ ತಡವಾಗುವುದಾಗಿ ಜಿಲ್ಲಾಡಳಿತ ಹೇಳಿದೆ. ಇದರ ನಡುವೆಯೇ ದೇವಸ್ಥಾನದ ಪ್ರಮುಖ ಗೇಟ್ ಬಂದ್ ಮಾಡಲಾಗಿದೆ.</p><p>ಇದರಿಂದಾಗಿ ದೇವರ ದರ್ಶನಕ್ಕೆ ಬಂದಿರುವ ಭಕ್ತರು, ಮುಖ್ಯ ಗೇಟ್ ಹೊರಗೆ ಕಾಯುತ್ತ ನಿಂತಿದ್ದಾರೆ. </p><p>'ಇದು ಸುಕ್ಷೇತ್ರ. ನಿತ್ಯವೂ ಸಾವಿರಾರು ಭಕ್ತರು ಬರುತ್ತಾರೆ. ಸಿದ್ದರಾಮಯ್ಯ ಬರುವುದು ಇನ್ನು ಒಂದು ಗಂಟೆ ತಡವಾಗಲಿದೆ. ಬೇಗನೇ ಗೇಟ್ ಬಂದ್ ಮಾಡುವುದು ಸರಿಯಲ್ಲ' ಎಂದು ಭಕ್ತರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>