ನ್ಯಾ.ಸದಾಶಿವ ಆಯೋಗದ ವರದಿಯನ್ನು ಅಂಗೀಕರಿಸಲಾಗುವುದು ಎಂದು ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ಕುಮಾರ್ ಕಟೀಲ್ ಹೇಳಿದ್ದರು. ಇದುವರೆಗೆ ವರದಿಯನ್ನು ಅಂಗೀಕರಿಸಿಲ್ಲ. ವರದಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವವರೆಗೆ ಧರಣಿಯನ್ನು ಮುಂದುವರಿಸುತ್ತೇವೆ. ಅದಕ್ಕಾಗಿ ಸಮುದಾಯದ ಒಳಮೀಸಲಾತಿ ಪರ ಹೋರಾಡುತ್ತಿರುವ ಪ್ರಗತಿಪರ ಮುಖಂಡರು, ಮಾದಿಗ, ಸಮಗಾರ, ಡೋರಕಕ್ಕಯ್ಯಾ, ಮೋಚಿ, ಅರುಂದತಿಯಾ, ಬಂಗಿ ಇತ್ಯಾದಿ ಸಮುದಾಯದ ಮುಖಂಡರು ಕಡ್ಡಾಯವಾಗಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.