<p><strong>ರಾಜೇಂದ್ರ ನಾಯಕ</strong></p>.<p>ಕಚವಿ(<strong>ಹಂಸಭಾವಿ</strong>): ಇಲ್ಲಿಗೆ ಸಮೀಪದ ಕಚವಿ ಗ್ರಾಮದ ಸರ್ದಾರ್ ವೀರಗೌಡ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮುಂದಾಗಿದ್ದಾರೆ.</p>.<p>ಶಾಲೆಯ ಆವರಣದಲ್ಲಿ ಹಲಸು, ಮಾವು, ಕಾಡು ಬಾದಾಮಿ, ನೇರಳೆ, ಬೆಟ್ಟದ ನೆಲ್ಲಿ, ಸೀಬೆಗಿಡ, ತೆಂಗು, ತೇಗ, ಬೀಟೆ, ಸಂಪಿಗೆ, ಅಶೋಕ ಗಿಡ, ಬೇವು, ನುಗ್ಗೆ, ಮತ್ತಿ, ಅಂಟವಾಳ ಗಿಡಗಳನ್ನು ಬೆಳೆಸಿದ್ದಾರೆ.</p>.<p>ತುಳಸಿ, ದೊಡ್ಡಪತ್ರೆ, ಲೋಳೆಸರ, ಅಮೃತಬಳ್ಳಿ, ಶತಾವರಿ ಔಷಧಿ ಸಸಿಗಳನ್ನು, ಮಲ್ಲಿಗೆ, ದಾಸವಾಳ, ಚೆಂಡು ಹೂ, ಗುಲಾಬಿ, ಸೇವಂತಿಗೆ ಹೂವಿನ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.</p>.<p>ಶಾಲೆಯ ಆವರಣದಲ್ಲಿ ಬೆಂಡೆ, ಟೊಮೆಟೊ, ಬದನೆಕಾಯಿ, ಮೆಣಸು, ಬೀನ್ಸ್, ತೊಂಡೆಬಳ್ಳಿ, ಕೋತಂಬರಿ ಸೊಪ್ಪು, ಮೆಂತೆ, ಪಾಲಕ್, ಮೂಲಂಗಿ ಬೆಳೆಯುತ್ತೇವೆ. ಈ ತಾಜಾ ತರಕಾರಿಯನ್ನು ಬಿಸಿಯೂಟಕ್ಕೆ ಬಳಸುತ್ತೇವೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಸಂತೋಷ.</p>.<p>ಶಾಲೆಯ ಆವರಣದಲ್ಲಿ ವಿವಿಧ ರೀತಿಯ ಗಿಡಗಳಿದ್ದು, ಅದರ ಕೆಳಗೆ ಕುಳಿತು ನಾವು ಅಭ್ಯಾಸ ಮಾಡುತ್ತೇವೆ. ಯಾವ ಸಸ್ಯದಿಂದ ಯಾವೆಲ್ಲ ಔಷಧ ತಯಾರಿಸಲಾಗುತ್ತದೆ ಎಂಬುದರ ಕುರಿತು ಶಿಕ್ಷಕರು ಮಾಹಿತಿ ನೀಡುತ್ತಾರೆ. ಗಿಡ-ಮರಗಳನ್ನು ಬೆಳೆಸುತ್ತಿರುವುದು ಖುಷಿ ತಂದಿದೆ ಎಂದು ಶಾಲೆಯ ವಿದ್ಯಾರ್ಥಿನಿ ಚಂದನ್ ಮಡಿವಾಳರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಜೇಂದ್ರ ನಾಯಕ</strong></p>.<p>ಕಚವಿ(<strong>ಹಂಸಭಾವಿ</strong>): ಇಲ್ಲಿಗೆ ಸಮೀಪದ ಕಚವಿ ಗ್ರಾಮದ ಸರ್ದಾರ್ ವೀರಗೌಡ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳು, ಶಿಕ್ಷಕರು ಮುಂದಾಗಿದ್ದಾರೆ.</p>.<p>ಶಾಲೆಯ ಆವರಣದಲ್ಲಿ ಹಲಸು, ಮಾವು, ಕಾಡು ಬಾದಾಮಿ, ನೇರಳೆ, ಬೆಟ್ಟದ ನೆಲ್ಲಿ, ಸೀಬೆಗಿಡ, ತೆಂಗು, ತೇಗ, ಬೀಟೆ, ಸಂಪಿಗೆ, ಅಶೋಕ ಗಿಡ, ಬೇವು, ನುಗ್ಗೆ, ಮತ್ತಿ, ಅಂಟವಾಳ ಗಿಡಗಳನ್ನು ಬೆಳೆಸಿದ್ದಾರೆ.</p>.<p>ತುಳಸಿ, ದೊಡ್ಡಪತ್ರೆ, ಲೋಳೆಸರ, ಅಮೃತಬಳ್ಳಿ, ಶತಾವರಿ ಔಷಧಿ ಸಸಿಗಳನ್ನು, ಮಲ್ಲಿಗೆ, ದಾಸವಾಳ, ಚೆಂಡು ಹೂ, ಗುಲಾಬಿ, ಸೇವಂತಿಗೆ ಹೂವಿನ ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.</p>.<p>ಶಾಲೆಯ ಆವರಣದಲ್ಲಿ ಬೆಂಡೆ, ಟೊಮೆಟೊ, ಬದನೆಕಾಯಿ, ಮೆಣಸು, ಬೀನ್ಸ್, ತೊಂಡೆಬಳ್ಳಿ, ಕೋತಂಬರಿ ಸೊಪ್ಪು, ಮೆಂತೆ, ಪಾಲಕ್, ಮೂಲಂಗಿ ಬೆಳೆಯುತ್ತೇವೆ. ಈ ತಾಜಾ ತರಕಾರಿಯನ್ನು ಬಿಸಿಯೂಟಕ್ಕೆ ಬಳಸುತ್ತೇವೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಸಂತೋಷ.</p>.<p>ಶಾಲೆಯ ಆವರಣದಲ್ಲಿ ವಿವಿಧ ರೀತಿಯ ಗಿಡಗಳಿದ್ದು, ಅದರ ಕೆಳಗೆ ಕುಳಿತು ನಾವು ಅಭ್ಯಾಸ ಮಾಡುತ್ತೇವೆ. ಯಾವ ಸಸ್ಯದಿಂದ ಯಾವೆಲ್ಲ ಔಷಧ ತಯಾರಿಸಲಾಗುತ್ತದೆ ಎಂಬುದರ ಕುರಿತು ಶಿಕ್ಷಕರು ಮಾಹಿತಿ ನೀಡುತ್ತಾರೆ. ಗಿಡ-ಮರಗಳನ್ನು ಬೆಳೆಸುತ್ತಿರುವುದು ಖುಷಿ ತಂದಿದೆ ಎಂದು ಶಾಲೆಯ ವಿದ್ಯಾರ್ಥಿನಿ ಚಂದನ್ ಮಡಿವಾಳರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>