ಆರೋಪಿಗಳ ಸುಳಿವು ನೀಡಿದ ಶ್ವಾನ!
‘ಆಡೂರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಸನೂರ ಗ್ರಾಮದಲ್ಲಿ 2023ರ ಜೂನ್ ತಿಂಗಳಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದಲ್ಲಿ ‘ಝಾನ್ಸಿ’ ಶ್ವಾನವು ಆರೋಪಿತರ ಮನೆಯ ಒಳಗೆ ಹೋಗಿ ಸುಳಿವು ನೀಡಿತ್ತು. ಇದರ ಆಧಾರದ ಮೇಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದರು. ಅಷ್ಟೇ ಅಲ್ಲ ಈ ಹಿಂದೆ ನಡೆದಿದ್ದ ಮೂರ್ನಾಲ್ಕು ಮನೆಗಳ್ಳತನ ಪ್ರಕರಣಗಳನ್ನೂ ಭೇದಿಸಲು ಸಾಧ್ಯವಾಯಿತು’ ಎಂದು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಇನ್ಸ್ಪೆಕ್ಟರ್ ಶಂಕರಗೌಡ ಪಾಟೀಲ ತಿಳಿಸಿದರು. 2023ರ ಆಗಸ್ಟ್ 1ರಂದು ಹಾನಗಲ್ ಪಟ್ಟಣದ ಮಕ್ಬೂಲಿಯಾ ನಗರದ ಮನೆಯೊಂದರ ಬೀಗ ಮುರಿದು ₹1.17 ಲಕ್ಷ ಮೌಲ್ಯದ ನಗದು ಚಿನ್ನಾಭರಣಗಳನ್ನು ಕಳ್ಳರು ದೋಚಿದ್ದರು. ‘ಝಾನ್ಸಿ’ ಶ್ವಾನವು ಆರೋಪಿತರ ಮನೆಯವರೆಗೆ ಹೋಗಿ ಪ್ರಮುಖ ಸುಳಿವು ನೀಡಿತ್ತು ಎಂದು ಶ್ವಾನ ತರಬೇತುದಾರರ ಧರ್ಮಗೌಡ ಮತ್ತು ಫಕ್ಕೀರಪ್ಪ ಕಾಮನಹಳ್ಳಿ ತಿಳಿಸಿದರು.