<p><strong>ಹಾವೇರಿ</strong>; ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಹಾಕಿರುವ ಪೆಂಡಾಲ್ ಶುಕ್ರವಾರ ಮತ್ತೆ ಕಳಚಿ ಬಿದ್ದಿದೆ.</p><p>ಸಮಾವೇಶದ ಭದ್ರತೆಗೆ ನಿಯೋಜನೆಗೊಂಡಿರುವ ಸಾವಿರಕ್ಕೂ ಹೆಚ್ಚು ಪೊಲೀಸರ ಹಾಜರಾತಿ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಗಾಳಿ ಬೀಸಿ ಪೆಂಡಾಲ್ ಕಳಚಿ ಬಿದ್ದಿದೆ. ಅದರ ಜೊತೆಯಲ್ಲಿಯೇ ಕಬ್ಬಿಣದ ಕಂಬಗಳು ತೇಲಾಡಿದವು. </p><p>ಗುರುವಾರವೂ ಪೆಂಡಾಲ್ ಕಳಚಿ ಬಿದ್ದು ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಮಲ್ಲೇಶ ಕಬ್ಬೂರ ಗಾಯಗೊಂಡಿದ್ದಾರೆ. ಈಗ ಶುಕ್ರವಾರ ಪುನಃ ಪೆಂಡಾಲ್ ಕಳಚಿ ಬಿದ್ದಿದೆ. ನಾಳೆ (ಫೆ. 14) ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪೆಂಡಾಲ್ ಕಳಚಿ ಬಿದ್ದರೆ ದೊಡ್ಡ ಅನಾಹುತ ಉಂಟಾಗಬಹುದು. ಎರಡೂ ಬಾರಿ ಪೆಂಡಾಲ್ ಕಳಚಿ ಬಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. </p><p>ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಹಾಗೂ ಇತರೆ ಅಧಿಕಾರಿಗಳು ಪೊಲೀಸರ ಹಾಜರಾತಿ ಪಡೆದು ಭದ್ರತಾ ಸೂಚನೆಗಳನ್ನು ನೀಡಿ ಸ್ಥಳದಿಂದ ತೆರಳಿದ್ದರು. ಈ ಸಂದರ್ಭದಲ್ಲಿ ಕೆಲ ಪೊಲೀಸರು ಮಾತ್ರ ಪೆಂಡಾಲ್ನಲ್ಲಿ ಇದ್ದರು. ಪೊಲೀಸರ ಸಮ್ಮುಖದಲ್ಲಿಯೇ ಪೆಂಡಾಲ್ ಕಳಚಿ ಬಿದ್ದಿದೆ. ಕಬ್ಬಿಣದ ಕಂಬಗಳು ಕುರ್ಚಿಗಳನ್ನು ಸೀಳಿ ಸಿಲುಕಿಕೊಂಡಿವೆ.</p><p> ಗುತ್ತಿಗೆದಾರನ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂಬ ಆರೋಪವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>; ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಹಾಕಿರುವ ಪೆಂಡಾಲ್ ಶುಕ್ರವಾರ ಮತ್ತೆ ಕಳಚಿ ಬಿದ್ದಿದೆ.</p><p>ಸಮಾವೇಶದ ಭದ್ರತೆಗೆ ನಿಯೋಜನೆಗೊಂಡಿರುವ ಸಾವಿರಕ್ಕೂ ಹೆಚ್ಚು ಪೊಲೀಸರ ಹಾಜರಾತಿ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಗಾಳಿ ಬೀಸಿ ಪೆಂಡಾಲ್ ಕಳಚಿ ಬಿದ್ದಿದೆ. ಅದರ ಜೊತೆಯಲ್ಲಿಯೇ ಕಬ್ಬಿಣದ ಕಂಬಗಳು ತೇಲಾಡಿದವು. </p><p>ಗುರುವಾರವೂ ಪೆಂಡಾಲ್ ಕಳಚಿ ಬಿದ್ದು ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಮಲ್ಲೇಶ ಕಬ್ಬೂರ ಗಾಯಗೊಂಡಿದ್ದಾರೆ. ಈಗ ಶುಕ್ರವಾರ ಪುನಃ ಪೆಂಡಾಲ್ ಕಳಚಿ ಬಿದ್ದಿದೆ. ನಾಳೆ (ಫೆ. 14) ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪೆಂಡಾಲ್ ಕಳಚಿ ಬಿದ್ದರೆ ದೊಡ್ಡ ಅನಾಹುತ ಉಂಟಾಗಬಹುದು. ಎರಡೂ ಬಾರಿ ಪೆಂಡಾಲ್ ಕಳಚಿ ಬಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. </p><p>ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಹಾಗೂ ಇತರೆ ಅಧಿಕಾರಿಗಳು ಪೊಲೀಸರ ಹಾಜರಾತಿ ಪಡೆದು ಭದ್ರತಾ ಸೂಚನೆಗಳನ್ನು ನೀಡಿ ಸ್ಥಳದಿಂದ ತೆರಳಿದ್ದರು. ಈ ಸಂದರ್ಭದಲ್ಲಿ ಕೆಲ ಪೊಲೀಸರು ಮಾತ್ರ ಪೆಂಡಾಲ್ನಲ್ಲಿ ಇದ್ದರು. ಪೊಲೀಸರ ಸಮ್ಮುಖದಲ್ಲಿಯೇ ಪೆಂಡಾಲ್ ಕಳಚಿ ಬಿದ್ದಿದೆ. ಕಬ್ಬಿಣದ ಕಂಬಗಳು ಕುರ್ಚಿಗಳನ್ನು ಸೀಳಿ ಸಿಲುಕಿಕೊಂಡಿವೆ.</p><p> ಗುತ್ತಿಗೆದಾರನ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂಬ ಆರೋಪವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>