<p><strong>ಹಾವೇರಿ</strong>; ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಹಾಕಿರುವ ಪೆಂಡಾಲ್ ಶುಕ್ರವಾರ ಮತ್ತೆ ಕಳಚಿ ಬಿದ್ದಿದೆ.</p><p>ಸಮಾವೇಶದ ಭದ್ರತೆಗೆ ನಿಯೋಜನೆಗೊಂಡಿರುವ ಸಾವಿರಕ್ಕೂ ಹೆಚ್ಚು ಪೊಲೀಸರ ಹಾಜರಾತಿ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಗಾಳಿ ಬೀಸಿ ಪೆಂಡಾಲ್ ಕಳಚಿ ಬಿದ್ದಿದೆ. ಅದರ ಜೊತೆಯಲ್ಲಿಯೇ ಕಬ್ಬಿಣದ ಕಂಬಗಳು ತೇಲಾಡಿದವು. </p><p>ಗುರುವಾರವೂ ಪೆಂಡಾಲ್ ಕಳಚಿ ಬಿದ್ದು ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಮಲ್ಲೇಶ ಕಬ್ಬೂರ ಗಾಯಗೊಂಡಿದ್ದಾರೆ. ಈಗ ಶುಕ್ರವಾರ ಪುನಃ ಪೆಂಡಾಲ್ ಕಳಚಿ ಬಿದ್ದಿದೆ. ನಾಳೆ (ಫೆ. 14) ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪೆಂಡಾಲ್ ಕಳಚಿ ಬಿದ್ದರೆ ದೊಡ್ಡ ಅನಾಹುತ ಉಂಟಾಗಬಹುದು. ಎರಡೂ ಬಾರಿ ಪೆಂಡಾಲ್ ಕಳಚಿ ಬಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. </p><p>ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಹಾಗೂ ಇತರೆ ಅಧಿಕಾರಿಗಳು ಪೊಲೀಸರ ಹಾಜರಾತಿ ಪಡೆದು ಭದ್ರತಾ ಸೂಚನೆಗಳನ್ನು ನೀಡಿ ಸ್ಥಳದಿಂದ ತೆರಳಿದ್ದರು. ಈ ಸಂದರ್ಭದಲ್ಲಿ ಕೆಲ ಪೊಲೀಸರು ಮಾತ್ರ ಪೆಂಡಾಲ್ನಲ್ಲಿ ಇದ್ದರು. ಪೊಲೀಸರ ಸಮ್ಮುಖದಲ್ಲಿಯೇ ಪೆಂಡಾಲ್ ಕಳಚಿ ಬಿದ್ದಿದೆ. ಕಬ್ಬಿಣದ ಕಂಬಗಳು ಕುರ್ಚಿಗಳನ್ನು ಸೀಳಿ ಸಿಲುಕಿಕೊಂಡಿವೆ.</p><p> ಗುತ್ತಿಗೆದಾರನ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂಬ ಆರೋಪವಿದೆ.</p>
<p><strong>ಹಾವೇರಿ</strong>; ನಗರದಲ್ಲಿ ಫೆ. 14ರಂದು ನಡೆಯಲಿರುವ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಹಾಗೂ ಭೂ ಗ್ಯಾರಂಟಿ ಸಮರ್ಪಣಾ ಸಮಾವೇಶಕ್ಕೆ ಹಾಕಿರುವ ಪೆಂಡಾಲ್ ಶುಕ್ರವಾರ ಮತ್ತೆ ಕಳಚಿ ಬಿದ್ದಿದೆ.</p><p>ಸಮಾವೇಶದ ಭದ್ರತೆಗೆ ನಿಯೋಜನೆಗೊಂಡಿರುವ ಸಾವಿರಕ್ಕೂ ಹೆಚ್ಚು ಪೊಲೀಸರ ಹಾಜರಾತಿ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ಗಾಳಿ ಬೀಸಿ ಪೆಂಡಾಲ್ ಕಳಚಿ ಬಿದ್ದಿದೆ. ಅದರ ಜೊತೆಯಲ್ಲಿಯೇ ಕಬ್ಬಿಣದ ಕಂಬಗಳು ತೇಲಾಡಿದವು. </p><p>ಗುರುವಾರವೂ ಪೆಂಡಾಲ್ ಕಳಚಿ ಬಿದ್ದು ಸುದ್ದಿ ವಾಹಿನಿಯೊಂದರ ಕ್ಯಾಮೆರಾಮನ್ ಮಲ್ಲೇಶ ಕಬ್ಬೂರ ಗಾಯಗೊಂಡಿದ್ದಾರೆ. ಈಗ ಶುಕ್ರವಾರ ಪುನಃ ಪೆಂಡಾಲ್ ಕಳಚಿ ಬಿದ್ದಿದೆ. ನಾಳೆ (ಫೆ. 14) ಲಕ್ಷಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಪೆಂಡಾಲ್ ಕಳಚಿ ಬಿದ್ದರೆ ದೊಡ್ಡ ಅನಾಹುತ ಉಂಟಾಗಬಹುದು. ಎರಡೂ ಬಾರಿ ಪೆಂಡಾಲ್ ಕಳಚಿ ಬಿದ್ದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. </p><p>ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ಹಾಗೂ ಇತರೆ ಅಧಿಕಾರಿಗಳು ಪೊಲೀಸರ ಹಾಜರಾತಿ ಪಡೆದು ಭದ್ರತಾ ಸೂಚನೆಗಳನ್ನು ನೀಡಿ ಸ್ಥಳದಿಂದ ತೆರಳಿದ್ದರು. ಈ ಸಂದರ್ಭದಲ್ಲಿ ಕೆಲ ಪೊಲೀಸರು ಮಾತ್ರ ಪೆಂಡಾಲ್ನಲ್ಲಿ ಇದ್ದರು. ಪೊಲೀಸರ ಸಮ್ಮುಖದಲ್ಲಿಯೇ ಪೆಂಡಾಲ್ ಕಳಚಿ ಬಿದ್ದಿದೆ. ಕಬ್ಬಿಣದ ಕಂಬಗಳು ಕುರ್ಚಿಗಳನ್ನು ಸೀಳಿ ಸಿಲುಕಿಕೊಂಡಿವೆ.</p><p> ಗುತ್ತಿಗೆದಾರನ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂಬ ಆರೋಪವಿದೆ.</p>