<p><strong>ಹಾವೇರಿ</strong>: ಸತತವಾಗಿ ಸುರಿದ ಭಾರಿ ಮಳೆಗೆ ನಗರದ ಐತಿಹಾಸಿಕ ಹೆಗ್ಗೇರಿ ಕೆರೆಭರ್ತಿಯಗಿದ್ದು, ಕೋಡಿ ಬಿದ್ದಿದೆ. ತುಂಬಿ ತುಳುಕುತ್ತಿರುವ ಕೆರೆಯ ನೋಟ ನಯನ ಮನೋಹರವಾಗಿದೆ.</p>.<p>ಹೆಗ್ಗೇರಿ ಕೆರೆ ಅತಿ ದೊಡ್ಡ ಕೆರೆ ಎನ್ನುವ ಖ್ಯಾತಿ ಹೊಂದಿದೆ. ಕಾಗಿನೆಲೆ ಕೆರೆ ಸೇರಿದಂತೆ ಬಹುತೇಕ ಕೆರೆಗಳು ಭರ್ತಿಯಾದ ಕಾರಣಕ್ಕೆ ಕೋಡಿಮೂಲಕ ನೀರು ಹರಿದು ಬರುತ್ತಿದೆ. ಈ ನೀರು ಮತ್ತು ಮಳೆಯ ನೀರು ಒಗ್ಗೂಡಿದ ಪರಿಣಾಮ ಹೆಗ್ಗೇರಿ ಕೆರೆ ಭರ್ತಿಯಾಗಿದೆ.</p>.<p>ಕೋಡಿಪ್ರದೇಶದ ನೀರು ಹೊಲಗಳಿಗೆ ನುಗ್ಗಿದ್ದು, ಸಾವಿರಾರು ಎಕರೆ ಕೃಷಿ ಬೆಳೆಗಳು ನೀರುಪಾಲಾಗಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೆರೆ ಕಾಲುವೆಯ ಹೂಳು ತೆಗೆಸಬೇಕು ಎಂದು ಆಗ್ರಹಿಸಿದ್ದಾರೆ.</p>.<p>ಕೆರೆಯ ದಂಡೆಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ. ಕೆರೆ ದಂಡೆಯನ್ನು ಹಾಗೂ ಕೋಡಿ ಪ್ರದೇಶವನ್ನು ಸಣ್ಣ ನೀರಾವರಿ ಇಲಾಖೆ ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ.</p>.<p>ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣಕೆರಿಮತ್ತಿಹಳ್ಳಿಯ ಸಮೀಪದ ಪೊಲೀಸ್ ವಸತಿ<br />ಸಂಕೀರ್ಣ ಜಲಾವೃತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ</strong>: ಸತತವಾಗಿ ಸುರಿದ ಭಾರಿ ಮಳೆಗೆ ನಗರದ ಐತಿಹಾಸಿಕ ಹೆಗ್ಗೇರಿ ಕೆರೆಭರ್ತಿಯಗಿದ್ದು, ಕೋಡಿ ಬಿದ್ದಿದೆ. ತುಂಬಿ ತುಳುಕುತ್ತಿರುವ ಕೆರೆಯ ನೋಟ ನಯನ ಮನೋಹರವಾಗಿದೆ.</p>.<p>ಹೆಗ್ಗೇರಿ ಕೆರೆ ಅತಿ ದೊಡ್ಡ ಕೆರೆ ಎನ್ನುವ ಖ್ಯಾತಿ ಹೊಂದಿದೆ. ಕಾಗಿನೆಲೆ ಕೆರೆ ಸೇರಿದಂತೆ ಬಹುತೇಕ ಕೆರೆಗಳು ಭರ್ತಿಯಾದ ಕಾರಣಕ್ಕೆ ಕೋಡಿಮೂಲಕ ನೀರು ಹರಿದು ಬರುತ್ತಿದೆ. ಈ ನೀರು ಮತ್ತು ಮಳೆಯ ನೀರು ಒಗ್ಗೂಡಿದ ಪರಿಣಾಮ ಹೆಗ್ಗೇರಿ ಕೆರೆ ಭರ್ತಿಯಾಗಿದೆ.</p>.<p>ಕೋಡಿಪ್ರದೇಶದ ನೀರು ಹೊಲಗಳಿಗೆ ನುಗ್ಗಿದ್ದು, ಸಾವಿರಾರು ಎಕರೆ ಕೃಷಿ ಬೆಳೆಗಳು ನೀರುಪಾಲಾಗಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೆರೆ ಕಾಲುವೆಯ ಹೂಳು ತೆಗೆಸಬೇಕು ಎಂದು ಆಗ್ರಹಿಸಿದ್ದಾರೆ.</p>.<p>ಕೆರೆಯ ದಂಡೆಯಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ಇತ್ತೀಚೆಗೆ ತೆರವುಗೊಳಿಸಲಾಗಿದೆ. ಕೆರೆ ದಂಡೆಯನ್ನು ಹಾಗೂ ಕೋಡಿ ಪ್ರದೇಶವನ್ನು ಸಣ್ಣ ನೀರಾವರಿ ಇಲಾಖೆ ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕಾಗಿದೆ.</p>.<p>ಕೆರೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣಕೆರಿಮತ್ತಿಹಳ್ಳಿಯ ಸಮೀಪದ ಪೊಲೀಸ್ ವಸತಿ<br />ಸಂಕೀರ್ಣ ಜಲಾವೃತವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>