ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಣೆಬೆನ್ನೂರು: ದೇವರಗುಡ್ಡ ಮಾಲತೇಶ ದೇವರ ಕಾರ್ಣಿಕೋತ್ಸವ

‘ವ್ಯಾದಿ ಬೂದಿ ಆದೀತಲೆ, ಸೃಷ್ಟಿ ಸಿರಿ ಆದೀತಲೆ ಪರಾಕ್‌’
Last Updated 24 ಅಕ್ಟೋಬರ್ 2020, 15:54 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಸುಕ್ಷೇತ್ರ ದೇವರಗುಡ್ಡದಲ್ಲಿ ವಿಜಯದಶಮಿ ಅಂಗವಾಗಿ ಶನಿವಾರ ಮಾಲತೇಶ ದೇವರ ಕಾರ್ಣಿಕೋತ್ಸವ ನಡೆಯಿತು.

ಕಾರ್ಣಿಕ ಗೊರವಯ್ಯನಾಗಪ್ಪಜ್ಜ ಉರ್ಮಿ ಅವರು ಬಿಲ್ಲನ್ನು ಏರಿ ಆಕಾಶದತ್ತ ಮುಖ ಮಾಡಿ, ‘ವ್ಯಾದಿ ಬೂದಿ ಆದೀತಲೆ, ಸೃಷ್ಟಿ ಸಿರಿ ಆದೀತಲೆ ಪರಾಕ್’‌ ಎಂದು ಭವಿಷ್ಯ ನುಡಿದರು.

‘ವ್ಯಾಧಿಎಂದರೆ ಸಾಂಕ್ರಾಮಿಕ ರೋಗವಾದ ಕೊರೊನಾ ಸೋಂಕು ಸೇರಿದಂತೆ ರೋಗ ರುಜಿನಗಳು ಬೂದಿಯಾಗಲಿವೆ. ಸೃಷ್ಟಿ ಸಿರಿಯಾದೀತಲೆ ಎಂದರೆ ಲೋಕ, ಭೂಮಿ, ಪರಿಸರ, ರಾಜ್ಯ, ರಾಷ್ಟ್ರ ಆರ್ಥಿಕವಾಗಿ ಸಂಪದ್ಭರಿತವಾಗಲಿದೆ ಎಂದರ್ಥ’ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಎಚ್‌. ಮುಕ್ಕಣ್ಣನವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT