ಹಾವೇರಿ ಜಿಲ್ಲೆಯವರೇ ಆದ ಅವರು, ಸ್ಥಳೀಯ ನಿವಾಸಿಗಳಿಗೆ ಹತ್ತಿರ ಆಗಲು ಈ ನಿರ್ಧಾರ ಕೈಗೊಂಡಿದ್ದರು. ವಾಸ್ತವ್ಯ ಉಳಿಯುವ ಮನೆಯಲ್ಲಿ ದಿನಂಪ್ರತಿ ತಯಾರಿಸುವ ಆಹಾರವನ್ನು ಸೇವಿಸುವುದಾಗಿ, ಯಾವುದೇ ರೀತಿಯ ವಿಶೇಷ ಭೋಜನ, ಸವಲತ್ತು ಇತ್ಯಾದಿಗಳನ್ನು ಅಪೇಕ್ಷಿಸುವುದಿಲ್ಲವೆಂದೂ, ಸಮ್ಮೇಳನ ನಡೆಯುವ ಸ್ಥಳಕ್ಕೆ ನಡೆದುಕೊಂಡೇ ಹೋಗುವ ವ್ಯವಸ್ಥೆ ನನ್ನ ಆದ್ಯತೆ ಎಂದೂ ಅವರು ಹೇಳಿದ್ದರು. ಆದರೆ, ಅವರು ಈಗ ನಿರ್ಧಾರ ಬದಲಿಸುವುದು ಚರ್ಚೆಗೆ ಗ್ರಾಸವಾಗಿದೆ.