ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದರೂ, ಪುಲ್ವಾಮಾ ದಾಳಿಯನ್ನು ಏಕೆ ತಡೆಯಲಿಲ್ಲ? ಯೋಧರನ್ನು ಹೆಲಿಕಾಪ್ಟರ್ ಮೂಲಕ ಕರೆದೊಯ್ಯಬೇಕು ಎಂಬ ಸೇನಾಧಿಕಾರಿಗಳ ಮನವಿಗೆ ಏಕೆ ಸ್ಪಂದಿಸಲಿಲ್ಲ? ರಸ್ತೆಯಲ್ಲಿ ಹೋಗುವಾಗಲೂ ಯೋಧರಿಗೆ ಏಕೆ ರಕ್ಷಣೆಯನ್ನೂ ನೀಡಲಿಲ್ಲ? ಎಂದು ಪ್ರಶ್ನಿಸಿದ ಅವರು, ಯೋಧರನ್ನು ಮೆರವಣಿಗೆ ಮಾಡಿದಂತೆ ರಸ್ತೆಯಲ್ಲೇ ಕಳುಹಿಸಿರುವುದನ್ನು ನೋಡಿದರೆ ಸಂಶಯ ಕಾಡುತ್ತದೆ ಎಂದು ಶಂಕೆ ವ್ಯಕ್ತಪಡಿಸಿದರು.