<p>ಹಾನಗಲ್: ನಿರ್ವಹಣೆ ವೆಚ್ಚವಿಲ್ಲದೆ ಉತ್ತಮ ಆದಾಯ ತಂದುಕೊಡುವ ಜೇನು ಕೃಷಿಯತ್ತ ರೈತ ಸಮೂಹ ಆಕರ್ಷಿತವಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.</p>.<p>ಅರಣ್ಯ ಇಲಾಖೆ ವತಿಯಿಂದ ಮಂಗಳವಾರ ಇಲ್ಲಿನ ಕುಮಾರೇಶ್ವರ ಪಿಯು ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಜೇನುನೊಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜೇನು ಪೆಟ್ಟಿಗೆ ಖರೀದಿಗೆ ಸರ್ಕಾರ ಸಹಾಯಧನ ನೀಡುತ್ತಿದೆ. ರೈತರಲ್ಲಿ ಜಾಗೃತಿ ಮೂಡಿಸಿ ತರಬೇತಿ ನೀಡಿದಾಗ ಜೇನು ಕೃಷಿಯತ್ತ ಆಸಕ್ತಿ ಹೆಚ್ಚಾಗುತ್ತದೆ’ ಎಂದರು.</p>.<p>‘ವಿಶ್ವದಲ್ಲಿ ಜೇನು ಕೃಷಿಯಿಂದ ವಾರ್ಷಿಕ ₹50 ಸಾವಿರ ಕೋಟಿ ವ್ಯವಹಾರ ನಡೆಯುತ್ತದೆ. ಆದರೆ ಅರಿವಿನ ಕೊರತೆ ಕಾರಣ ನಮ್ಮಲ್ಲಿ ಇದಕ್ಕೆ ತಕ್ಕ ಪ್ರಮಾಣದಲ್ಲಿ ವ್ಯವಹಾರ ನಡೆಯುತ್ತಿಲ್ಲ’ ಎಂದರು.</p>.<p>ಹಾವೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಬಿ.ಎಸ್ ಮಾತನಾಡಿ, ‘ಜೇನು ನೊಣ ರೈತ ಮಿತ್ರ. ಸಸ್ಯ ಸಂಪತ್ತು ಸೇರಿದಂತೆ ಪರಿಸರದ ರಕ್ಷಣೆಗೆ ಜೇನು ಹುಳುಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೇನು ನೊಣಗಳ ಸಹಕಾರದಿಂದ ಫಸಲು ಪ್ರಮಾಣ ಹೆಚ್ಚಿಸಬಹುದು’ ಎಂದರು.</p>.<p>ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ, ‘ಜೇಣು ನೊಣಗಳ ಜೀವನಕ್ರಮ ಅರಿಯಬೇಕು. 500 ಹೂವುಗಳ ಪರಾಗಸ್ಪರ್ಷದಿಂದ ಒಂದು ಹನಿ ಜೇನುತುಪ್ಪ ಸೃಷ್ಟಿಯಾಗುತ್ತದೆ’ ಎಂದರು.</p>.<p>ಜೇನು ಕೃಷಿ ಕುರಿತು ಉಪನ್ಯಾಸ ನೀಡಿದ ಶಿರಸಿಯ ಮಧುಕೇಶ್ವರ ಹೆಗಡೆ, ‘ಔಷಧಿಯ ಸಸ್ಯಗಳನ್ನು ಬೆಳೆಸುವುದು ಜೇನು ಕೃಷಿಗೆ ಪೂರಕ. ಜೇನು ಉತ್ಪನ್ನಗಳಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಆದಾಯ<br /> ಗಳಿಸಬಹುದು’ ಎಂದರು.</p>.<p>ಸಹಾಯಕ ಕೃಷಿ ನಿರ್ದೇಶಕ ಮೋಹನಕುಮಾರ ಕೆ ಮತ್ತು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.</p>.<p>ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ಕಾಲೇಜು ಪ್ರಾಚಾರ್ಯ ಚಿರಂಜೀವಿ ಆಡೂರ, ವಲಯ ಅರಣ್ಯಾಧಿಕಾರಿ ಗಿರೀಶ ಚೌಗಲೆ, ಅರಣ್ಯ ಇಲಾಖೆ ಅಧಿಕಾರಿಗಳಾದ<br /> ಸಂತೋಷ ಸವಣೂರ, ಅಬ್ದುಲ್ ನಧಾಪ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾನಗಲ್: ನಿರ್ವಹಣೆ ವೆಚ್ಚವಿಲ್ಲದೆ ಉತ್ತಮ ಆದಾಯ ತಂದುಕೊಡುವ ಜೇನು ಕೃಷಿಯತ್ತ ರೈತ ಸಮೂಹ ಆಕರ್ಷಿತವಾಗಬೇಕು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.</p>.<p>ಅರಣ್ಯ ಇಲಾಖೆ ವತಿಯಿಂದ ಮಂಗಳವಾರ ಇಲ್ಲಿನ ಕುಮಾರೇಶ್ವರ ಪಿಯು ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಜೇನುನೊಣ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಜೇನು ಪೆಟ್ಟಿಗೆ ಖರೀದಿಗೆ ಸರ್ಕಾರ ಸಹಾಯಧನ ನೀಡುತ್ತಿದೆ. ರೈತರಲ್ಲಿ ಜಾಗೃತಿ ಮೂಡಿಸಿ ತರಬೇತಿ ನೀಡಿದಾಗ ಜೇನು ಕೃಷಿಯತ್ತ ಆಸಕ್ತಿ ಹೆಚ್ಚಾಗುತ್ತದೆ’ ಎಂದರು.</p>.<p>‘ವಿಶ್ವದಲ್ಲಿ ಜೇನು ಕೃಷಿಯಿಂದ ವಾರ್ಷಿಕ ₹50 ಸಾವಿರ ಕೋಟಿ ವ್ಯವಹಾರ ನಡೆಯುತ್ತದೆ. ಆದರೆ ಅರಿವಿನ ಕೊರತೆ ಕಾರಣ ನಮ್ಮಲ್ಲಿ ಇದಕ್ಕೆ ತಕ್ಕ ಪ್ರಮಾಣದಲ್ಲಿ ವ್ಯವಹಾರ ನಡೆಯುತ್ತಿಲ್ಲ’ ಎಂದರು.</p>.<p>ಹಾವೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಬಿ.ಎಸ್ ಮಾತನಾಡಿ, ‘ಜೇನು ನೊಣ ರೈತ ಮಿತ್ರ. ಸಸ್ಯ ಸಂಪತ್ತು ಸೇರಿದಂತೆ ಪರಿಸರದ ರಕ್ಷಣೆಗೆ ಜೇನು ಹುಳುಗಳು ಪ್ರಮುಖ ಪಾತ್ರ ವಹಿಸುತ್ತವೆ. ಜೇನು ನೊಣಗಳ ಸಹಕಾರದಿಂದ ಫಸಲು ಪ್ರಮಾಣ ಹೆಚ್ಚಿಸಬಹುದು’ ಎಂದರು.</p>.<p>ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ, ‘ಜೇಣು ನೊಣಗಳ ಜೀವನಕ್ರಮ ಅರಿಯಬೇಕು. 500 ಹೂವುಗಳ ಪರಾಗಸ್ಪರ್ಷದಿಂದ ಒಂದು ಹನಿ ಜೇನುತುಪ್ಪ ಸೃಷ್ಟಿಯಾಗುತ್ತದೆ’ ಎಂದರು.</p>.<p>ಜೇನು ಕೃಷಿ ಕುರಿತು ಉಪನ್ಯಾಸ ನೀಡಿದ ಶಿರಸಿಯ ಮಧುಕೇಶ್ವರ ಹೆಗಡೆ, ‘ಔಷಧಿಯ ಸಸ್ಯಗಳನ್ನು ಬೆಳೆಸುವುದು ಜೇನು ಕೃಷಿಗೆ ಪೂರಕ. ಜೇನು ಉತ್ಪನ್ನಗಳಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಆದಾಯ<br /> ಗಳಿಸಬಹುದು’ ಎಂದರು.</p>.<p>ಸಹಾಯಕ ಕೃಷಿ ನಿರ್ದೇಶಕ ಮೋಹನಕುಮಾರ ಕೆ ಮತ್ತು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಬಣಕಾರ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.</p>.<p>ರೈತ ಮುಖಂಡರಾದ ಅಡಿವೆಪ್ಪ ಆಲದಕಟ್ಟಿ, ಮರಿಗೌಡ ಪಾಟೀಲ, ಕಾಲೇಜು ಪ್ರಾಚಾರ್ಯ ಚಿರಂಜೀವಿ ಆಡೂರ, ವಲಯ ಅರಣ್ಯಾಧಿಕಾರಿ ಗಿರೀಶ ಚೌಗಲೆ, ಅರಣ್ಯ ಇಲಾಖೆ ಅಧಿಕಾರಿಗಳಾದ<br /> ಸಂತೋಷ ಸವಣೂರ, ಅಬ್ದುಲ್ ನಧಾಪ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>