ಸಾಯುವುದಕ್ಕೂ ಮುನ್ನ ತನ್ನ ಸ್ನೇಹಿತರಿಗೆ ಪ್ರವೀಣ ಕಳುಹಿಸಿದ್ದ ಎನ್ನಲಾದ ವಾಟ್ಸ್ಆ್ಯಪ್ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.‘ಸುಭಾಷ ಕಡೂರು, ಮಲ್ಲೇಶ ಕಡೂರು, ನಾಗರಾಜ ಕಡೂರು, ಬಂಗಾರಿ ಕಡೂರು, ಸಂಜು ಕಡೂರು, ರಾಮ ಕಡೂರು, ರಂಗಪ್ಪ ಗೊಂಗೇರಿ ಮುಂತಾದವರು ನನ್ನ ಸಾವಿಗೆ ಕಾರಣರಾಗಿದ್ದಾರೆ’ ಎಂದು ಸಂದೇಶದಲ್ಲಿ ಪ್ರವೀಣ ದೂರಿದ್ದಾನೆ.