ವಿರೂಪಾಕ್ಷಪ್ಪಅವರ ಕಿರಿಯ ಪುತ್ರ ಅರುಣ ಎಂಬಾತ ಅಗಡಿ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದು, ಡಿ.19ರಂದು ಯುವತಿಯನ್ನು ಹರಿಹರಕ್ಕೆ ಕರೆದೊಯ್ದು ಮದುವೆ ಮಾಡಿಕೊಂಡಿದ್ದ. ವಿಷಯ ತಿಳಿದ ಯುವತಿಯ ಮನೆಯವರು ಕುಪಿತರಾಗಿ, ಅರುಣ ಮತ್ತು ಯುವತಿ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿ, ಅರುಣ ಅವರ ತಾಯಿ, ಅಣ್ಣ ಕಿರಣಮತ್ತು ಅತ್ತಿಗೆ ಸೌಜನ್ಯಾರನ್ನು ಕಾರಿನಲ್ಲಿ ಕರೆದೊಯ್ದು ಎರಡು ದಿನ ಅಕ್ರಮ ಬಂಧನಲ್ಲಿರಿಸಿದ್ದರು.