ಶಿವರಾತ್ರಿ ಹಬ್ಬದ ಆಚರಣೆ ದಿನ ಬಂಕಾಪುರ ಕೆಂಡದಮಠ ರೇವಣಸಿದ್ದೇಶ್ವರ ಸ್ವಾಮೀಜಿ ಅವರು ವಿಶೇಷ ಪೂಜೆ, ವಾಸ್ತುಶಾಂತಿ ಹೋಮ, ಪ್ರಾಣಪ್ರತಿಷ್ಠಾಪನೆ ಮಾಡಿ, ದರ್ಶನಕ್ಕೆ ಮುಕ್ತಗೊಳಿಸಿದರು. ಬಸಾಪುರದ ಬಸವ ಕಲಾ ಲೋಕ ಸಂಘದಿಂದ ಭಜನೆ ಕಾರ್ಯಕ್ರಮ ನೆರವೇರಿತು. ಬೀರಲಿಂಗೇಶ್ವರ ದೇವಸ್ಥಾನದ ಪದಾಧಿಕಾರಿಗಳು, ಗಜಾನನ ಯುವಕ ಮಿತ್ರ ಮಂಡಳಿ ಸದಸ್ಯರು ಹಾಗೂ ಭಕ್ತರು ಭಾಗವಹಿಸಿದ್ದರು.