ಬೀಜಾಮೃತ, ಜೀವಾಮೃತ, ಪಂಚಗವ್ಯ, ಮೀನು ಗೊಬ್ಬರ, ಸತ್ತ ಪ್ರಾಣಿಗಳ ಗೊಬ್ಬರ, ಡಬ್ಲ್ಯೂಡಿಸಿ ಕೃಷಿ ತ್ಯಾಜ್ಯದಿಂದ ತಯಾರಿಸಿದ ರಸ ಹೀಗೆ ಹಲವು ಅಮೃತಗಳನ್ನು ಸ್ವತಃ ತಯಾರಿಸಿ ಭೂಮಿಗೆ ಉಣಿಸಿ ಅದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. 1 ಎಕರೆ 15 ಗುಂಟೆ ಭೂಮಿಯಲ್ಲಿ ಅಡಿಕೆ ಕೃಷಿ ಮಾಡಿರುವ ವಾಸುದೇವಮೂರ್ತಿ ಅವರು ಕಳೆದ 3-4 ವರ್ಷಗಳಿಂದ 150 ಕ್ವಿಂಟಲ್ ಫಸಲು ಉತ್ಪಾದಿಸಿ, ₹7.5 ಲಕ್ಷ ಆದಾಯ ಗಳಿಸಿದ್ದಾರೆ.