<p><strong>ಹಾನಗಲ್:</strong> ಶರಣ ಪರಂಪರೆ, ಸಂಸ್ಕೃತಿಯ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವಲ್ಲಿ ಪಂ.ಪಂಚಾಕ್ಷರಿ ಗವಾಯಿಗಳ ಕಾಳಜಿ ಅನುಕರಣೀಯ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.</p>.<p>ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಪಂಚಾಕ್ಷರಿ ಗವಾಯಿಗಳ 135ನೇ ಜಯಂತ್ಯುತ್ಸವ, ಸಂಗೀತೋತ್ಸವ ಹಾಗೂ ಹಕ್ಕಲ ಬಸವೇಶ್ವರ ಜಾತ್ರಾ ಮಹೋತ್ಸವದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.</p>.<p>ಅಂಧರಾಗಿ ಹುಟ್ಟಿದ ಗವಾಯಿಗಳು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವರು. ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಕರುಣೆಯ ಕಂದನಾಗಿ ಬೆಳೆದು ಸಂಗೀತದಲ್ಲಿ ಪರಿಣಿತರಾಗಿ ಶ್ರೇಷ್ಠ ಗವಾಯಿಗಳೆನಿಸಿದರು ಎಂದರು.</p>.<p>ಶಾಸಕ ಶ್ರೀನಿವಾಸ ಮಾನೆ, ಪಂಚಾಕ್ಷರಿ ಗವಾಯಿಗಳ ಗಾಯನದಲ್ಲಿ ಭಕ್ತಿ, ಶುದ್ಧತೆ ಮತ್ತು ಆತ್ಮಸ್ಪರ್ಶ ಭಾವನೆಗಳು ಸ್ಪಷ್ಟವಾಗಿ ಅನಾವರಣಗೊಳ್ಳುತ್ತಿದ್ದವು. ಶಿಸ್ತು ಮತ್ತು ಸತ್ಯನಿಷ್ಠೆಗೆ ಅವರ ಜೀವನ ಸರಳತೆಯು ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.</p>.<p>ಹೋತನಹಳ್ಳಿಯ ಸಿಂಧಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಲಿಂಗಸೂರಿನ ಮಾಣಿಕ್ಕೇಶ್ವರಿ ಮಾತಾ ಸಮ್ಮುಖ ವಹಿಸಿದ್ದರು. ಸಂಗೀತ ಕಲಾವಿದರಿಂದ ಸಂಗೀತೋತ್ಸವ ನಡೆಯಿತು.</p>.<p>ಚಂದ್ರಗೌಡ ಪಾಟೀಲ, ಚಂಪಾವತಿ ಪೂಜಾರ, ತಿರಕಪ್ಪ ಗಾಣಗೇರ, ಸಿದ್ದಲಿಂಗ ಲಕ್ಮಾಪೂರ, ಪಂಚಾಕ್ಷರಿ ದೊಡ್ಡಹುಣಸಿಕಟ್ಟಿ, ಶಿವಪ್ಪ ಗಿರಿಯಪ್ಪವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ಶರಣ ಪರಂಪರೆ, ಸಂಸ್ಕೃತಿಯ ಮೌಲ್ಯಗಳನ್ನು ಯುವ ಪೀಳಿಗೆಗೆ ತಲುಪಿಸುವಲ್ಲಿ ಪಂ.ಪಂಚಾಕ್ಷರಿ ಗವಾಯಿಗಳ ಕಾಳಜಿ ಅನುಕರಣೀಯ ಎಂದು ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.</p>.<p>ತಾಲ್ಲೂಕಿನ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಪಂಚಾಕ್ಷರಿ ಗವಾಯಿಗಳ 135ನೇ ಜಯಂತ್ಯುತ್ಸವ, ಸಂಗೀತೋತ್ಸವ ಹಾಗೂ ಹಕ್ಕಲ ಬಸವೇಶ್ವರ ಜಾತ್ರಾ ಮಹೋತ್ಸವದ ಧರ್ಮಸಭೆಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.</p>.<p>ಅಂಧರಾಗಿ ಹುಟ್ಟಿದ ಗವಾಯಿಗಳು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವರು. ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಕರುಣೆಯ ಕಂದನಾಗಿ ಬೆಳೆದು ಸಂಗೀತದಲ್ಲಿ ಪರಿಣಿತರಾಗಿ ಶ್ರೇಷ್ಠ ಗವಾಯಿಗಳೆನಿಸಿದರು ಎಂದರು.</p>.<p>ಶಾಸಕ ಶ್ರೀನಿವಾಸ ಮಾನೆ, ಪಂಚಾಕ್ಷರಿ ಗವಾಯಿಗಳ ಗಾಯನದಲ್ಲಿ ಭಕ್ತಿ, ಶುದ್ಧತೆ ಮತ್ತು ಆತ್ಮಸ್ಪರ್ಶ ಭಾವನೆಗಳು ಸ್ಪಷ್ಟವಾಗಿ ಅನಾವರಣಗೊಳ್ಳುತ್ತಿದ್ದವು. ಶಿಸ್ತು ಮತ್ತು ಸತ್ಯನಿಷ್ಠೆಗೆ ಅವರ ಜೀವನ ಸರಳತೆಯು ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.</p>.<p>ಹೋತನಹಳ್ಳಿಯ ಸಿಂಧಗಿಮಠದ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಲಿಂಗಸೂರಿನ ಮಾಣಿಕ್ಕೇಶ್ವರಿ ಮಾತಾ ಸಮ್ಮುಖ ವಹಿಸಿದ್ದರು. ಸಂಗೀತ ಕಲಾವಿದರಿಂದ ಸಂಗೀತೋತ್ಸವ ನಡೆಯಿತು.</p>.<p>ಚಂದ್ರಗೌಡ ಪಾಟೀಲ, ಚಂಪಾವತಿ ಪೂಜಾರ, ತಿರಕಪ್ಪ ಗಾಣಗೇರ, ಸಿದ್ದಲಿಂಗ ಲಕ್ಮಾಪೂರ, ಪಂಚಾಕ್ಷರಿ ದೊಡ್ಡಹುಣಸಿಕಟ್ಟಿ, ಶಿವಪ್ಪ ಗಿರಿಯಪ್ಪವರ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>