<p><strong>ರಾಣೆಬೆನ್ನೂರು</strong>: ಮೇಡ್ಲೇರಿ ರಸ್ತೆಯ ಪಂಪಾನಗರದ ನಿವಾಸಿ ಪದ್ಮಾವತಿ (ಹರ್ಷಿತಾ) ಕುರುವತ್ತಿ ಅವರು ತಮ್ಮ 42ನೇ ವಯಸ್ಸಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣಗೊಂಡಿದ್ದಾರೆ.</p>.<p>ತವರು ಮನೆಯಾದ ತಾಲ್ಲೂಕಿನ ದೇವರಗುಡ್ಡದಲ್ಲಿರುವ ಮಾಲತೇಶ ಪ್ರೌಢಶಾಲೆಯಲ್ಲಿ ಖಾಸಗಿ ಅಭ್ಯರ್ಥಿಯಾಗಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಬರೆದಿದ್ದ ಅವರು ಶೇ 48.48ರಷ್ಟು ಫಲಿತಾಂಶ ಪಡೆದಿದ್ದಾರೆ. </p>.<p>ಪದ್ಮಾವತಿ ಅವರು 9ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ನಂತರ, ಅವರಿಗೆ ಕೊಟ್ರೇಶಪ್ಪ ಜೊತೆ ಮದುವೆಯಾಗಿತ್ತು. ಮದುವೆ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆ ಪಾಸಾಗಬೇಕೆಂಬುದು ಅವರ ಹಂಬಲವಾಗಿತ್ತು.</p>.<p>ಅವರ ಮಗ ಭೂಷಣ, ಬೆಂಗಳೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಪುತ್ರಿ ಸುಚಿತ್ರಾ, ಮೈಸೂರಿನಲ್ಲಿರುವ ಕಂಪನಿಯೊಂದರ ಉದ್ಯೋಗಿ. ಪತ್ನಿಯ ಹಂಬಲವನ್ನು ಈಡೇರಿಸಲು ಪತಿ ಕೊಟ್ರೇಶಪ್ಪ ಸಹಕಾರ ನೀಡಿದ್ದರು.</p>.<p>‘ಮನೆಯಲ್ಲಿ ಓದಲು ನನ್ನ ಪತಿ ಹಾಗೂ ಸಹೋದರರಾದ ಶ್ರೀಕಾಂತ ಮತ್ತು ಮಾಲತೇಶ ಬೆಟಗೇರಿ ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಿದರು. ಮುಂದೆ ಪ್ಯಾರಾಮೆಡಿಕಲ್ ಕೋರ್ಸ್ ಮಾಡುವ ಆಸೆ ಇದೆ’ ಎಂದು ಪದ್ಮಾವತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>Quote - ಎಸ್ಎಸ್ಎಲ್ಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಮಹಿಳೆಯರಿಗೆ ಪದ್ಮಾವತಿ ಪ್ರೇರಣೆಯಾಗಿದ್ದಾರೆ. ಶ್ಯಾಮಸುಂದರ ಅಡಿಗ ಕ್ಷೇತ್ರ ಶಿಕ್ಷಣಾಧಿಕಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು</strong>: ಮೇಡ್ಲೇರಿ ರಸ್ತೆಯ ಪಂಪಾನಗರದ ನಿವಾಸಿ ಪದ್ಮಾವತಿ (ಹರ್ಷಿತಾ) ಕುರುವತ್ತಿ ಅವರು ತಮ್ಮ 42ನೇ ವಯಸ್ಸಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣಗೊಂಡಿದ್ದಾರೆ.</p>.<p>ತವರು ಮನೆಯಾದ ತಾಲ್ಲೂಕಿನ ದೇವರಗುಡ್ಡದಲ್ಲಿರುವ ಮಾಲತೇಶ ಪ್ರೌಢಶಾಲೆಯಲ್ಲಿ ಖಾಸಗಿ ಅಭ್ಯರ್ಥಿಯಾಗಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಬರೆದಿದ್ದ ಅವರು ಶೇ 48.48ರಷ್ಟು ಫಲಿತಾಂಶ ಪಡೆದಿದ್ದಾರೆ. </p>.<p>ಪದ್ಮಾವತಿ ಅವರು 9ನೇ ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿದ್ದರು. ನಂತರ, ಅವರಿಗೆ ಕೊಟ್ರೇಶಪ್ಪ ಜೊತೆ ಮದುವೆಯಾಗಿತ್ತು. ಮದುವೆ ಬಳಿಕ ಎಸ್ಎಸ್ಎಲ್ಸಿ ಪರೀಕ್ಷೆ ಪಾಸಾಗಬೇಕೆಂಬುದು ಅವರ ಹಂಬಲವಾಗಿತ್ತು.</p>.<p>ಅವರ ಮಗ ಭೂಷಣ, ಬೆಂಗಳೂರಿನಲ್ಲಿ ಎಂಬಿಬಿಎಸ್ ಓದುತ್ತಿದ್ದಾರೆ. ಪುತ್ರಿ ಸುಚಿತ್ರಾ, ಮೈಸೂರಿನಲ್ಲಿರುವ ಕಂಪನಿಯೊಂದರ ಉದ್ಯೋಗಿ. ಪತ್ನಿಯ ಹಂಬಲವನ್ನು ಈಡೇರಿಸಲು ಪತಿ ಕೊಟ್ರೇಶಪ್ಪ ಸಹಕಾರ ನೀಡಿದ್ದರು.</p>.<p>‘ಮನೆಯಲ್ಲಿ ಓದಲು ನನ್ನ ಪತಿ ಹಾಗೂ ಸಹೋದರರಾದ ಶ್ರೀಕಾಂತ ಮತ್ತು ಮಾಲತೇಶ ಬೆಟಗೇರಿ ಹಾಗೂ ಶಿಕ್ಷಕರು ಪ್ರೋತ್ಸಾಹ ನೀಡಿದರು. ಮುಂದೆ ಪ್ಯಾರಾಮೆಡಿಕಲ್ ಕೋರ್ಸ್ ಮಾಡುವ ಆಸೆ ಇದೆ’ ಎಂದು ಪದ್ಮಾವತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>Quote - ಎಸ್ಎಸ್ಎಲ್ಸಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಮಹಿಳೆಯರಿಗೆ ಪದ್ಮಾವತಿ ಪ್ರೇರಣೆಯಾಗಿದ್ದಾರೆ. ಶ್ಯಾಮಸುಂದರ ಅಡಿಗ ಕ್ಷೇತ್ರ ಶಿಕ್ಷಣಾಧಿಕಾರಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>