ಇಲ್ಲಿನ ಆದಿಶಕ್ತಿ ಮತ್ತು ಚೌಡೇಶ್ವರಿ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನದ, ಕೊಟ್ಟೂರೇಶ್ವರಮಠ, ಕೋಟೆ, ಕುರುಬಗೇರಿ ಕಾಳಮ್ಮನ ಗುಡಿ, ಮೃತ್ಯುಂಜಯನಗರದ ಮೃತ್ಯುಂಜಯ ದೇವಸ್ಥಾನ, ಸಿದ್ದಾರೂಢಮಠ, ಬಸವಣ್ಣ ದೇವಸ್ಥಾನ, ಚತುರ್ಮುಖಿ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಮೌನೇಶ್ವರ ದೇವಸ್ಥಾನ, ತುಳಜಾಭವಾನಿ ಗುಡಿ, ಶನೈಶ್ಚರ ಮಂದಿರ, ವಾಗೀಶನಗರದ ವೀರಭದ್ರಸ್ವಾಮಿ ದೇವಸ್ಥಾನ, ಸಿದ್ದೇಶ್ವರ ದೇವಸ್ಥಾನ ಸೇರಿದಂತೆ ನಗರದ ವಿವಿಧ ಕಡೆಗಳಲ್ಲಿ ನಾಗರ ಪಂಚಮಿ ಹಬ್ಬದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳು ಅಜ್ಜನ ಪಾಲು, ಅಮ್ಮನಪಾಲು, ಗುರುಹಿರಿಯರ ಪಾಲು, ಮಕ್ಕಳ ಪಾಲು ಎಂದು ಹೇಳುವ ಮೂಲಕ ಮಹಿಳೆಯರು ಮತ್ತು ಮಕ್ಕಳು ನಾಗಪ್ಪನ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿದರು. ನಂತರ ಮನೆ ಮಂದಿಯಲ್ಲ ಜೋಕಾಲಿ ಜೀಕಿದರು.