<p><strong>ಹಾವೇರಿ:</strong>ಬದುಕಿಗೆ ವಿಜ್ಞಾನ, ತಂತ್ರಜ್ಞಾನದ ಜೊತೆ ಧ್ಯಾನವೂ ಬಹುಮುಖ್ಯ. ಅಂಗವೇ ಲಿಂಗವಾಗುವ ಧ್ಯಾನದ ‘ಸಹಜ ಶಿವಯೋಗ’ವು ಕಾಣದ ಕಾಯಿಲೆಗಳಿಗೂ ಪರಿಹಾರ ನೀಡುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.</p>.<p>ಲಿಂ.ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೋತ್ಸವದ ನಿಮಿತ್ತ ಇಲ್ಲಿನ ಹೊಸಮಠದಲ್ಲಿ ನಡೆಯುತ್ತಿರುವ ‘ಶರಣ ಸಂಸ್ಕೃತಿ ಉತ್ಸವ’ದಲ್ಲಿ ಶನಿವಾರ ಬೆಳಿಗ್ಗೆ ‘ಸಹಜ ಶಿವಯೋಗ’ದ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.</p>.<p>ಖಿನ್ನತೆಯು ಬಾಲ್ಯದಿಂದ ವೃದ್ಧಾಪ್ಯ ತನಕ ಸಾಮಾನ್ಯನಿಂದ ಸ್ವಾಮೀಜಿಗಳ ತನಕ ಎಲ್ಲರಿಗೂ ಕಾಡುವ ಕಾಯಿಲೆ. ಈ ಮಹಾಮಾರಿಯು ಹಲವರ ಬದುಕಗಳನ್ನೂ ಬಲಿ ಪಡೆದಿದೆ. ಇದು, ವೈದ್ಯಕೀಯ ಪರೀಕ್ಷೆಗಳಲ್ಲಿ ಪತ್ತೆಯಾಗದಿರಬಹುದು. ಆದರೆ, ಪರಿಣಾಮಕಾರಿ ಧ್ಯಾನದಿಂದ ಬಗೆಹರಿಸಬಹುದು ಎಂದರು.</p>.<p>ಒಳಗಿನ ಸಮಸ್ಯೆಗಳಿಗೆ ಹೊರಗೆ ಪರಿಹಾರ ಹುಡುಕಾಡಬೇಡಿ. ಅಂತರಂಗದಲ್ಲಿ ಪಾರಮಾರ್ಥ ತುಂಬಿಕೊಳ್ಳಿ. ಬದುಕೇ ಧ್ಯಾನವಾಗಲಿ, ಸಮಸ್ಯೆಗಳು ಕರಗಿ ಹೋಗುತ್ತವೆ ಎಂದರು.</p>.<p>ಪಾಶ್ಚಾತ್ಯದ ಸಿದ್ಧಾಂತಗಳು ತತ್ವಜ್ಞಾನ ನೀಡಿದರೆ, ಶರಣರು ತತ್ವಜ್ಞಾನದ ಜೊತೆ ಕಾಯಕವನ್ನು ನೀಡಿದ್ದಾರೆ. ಹೀಗಾಗಿ, ಧ್ಯಾನ, ಏಕಾಗ್ರತೆ, ಶಿಯೋಗಗಳನ್ನು ‘ಪಾರ್ಟ್ ಟೈಮ್ ’ ರೀತಿ ಮಾಡಬೇಡಿ. ಧ್ಯಾನದಲ್ಲಿ ಲೀನವಾಗಿ, ಕಣ್ಣಲ್ಲಿ ಭಾಷ್ಪ ತುಂಬುವಷ್ಟು ತಲ್ಲೀನರಾಗಿ ಎಂದರು.</p>.<p>ಅದಕ್ಕಾಗಿ ಸತ್ಯ ಶುದ್ಧ ಕಾಯಕ ಮಾಡಿ. ಸತ್ ಚಿಂತನೆ, ಸದ್ಭಾವನೆ, ಸದ್ವರ್ತನೆಗಳಿಂದ ಸನ್ಮಾರ್ಗ ಮತ್ತು ಯಶಸ್ಸು ಕಂಡುಕೊಳ್ಳಿ ಎಂದ ಅವರು, ಬಸವಣ್ಣನವರ ಮಾರ್ಗವನ್ನು ರಾಷ್ಟ್ರಕವಿ ಕುವೆಂಪು ಅವರು ‘ಋಜುಮಾರ್ಗ’ ಎಂದು ಕರೆದಿದ್ದಾರೆ ಎಂದರು.</p>.<p>ಹಾವನೂರು ದಳವಾಯಿ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ತನುವಿದ್ದಲ್ಲೇ ಮನ ಇರಬೇಕು. ನಮ್ಮ ಮನಸ್ಸಿನ ಮೇಲೆ ನಮಗೆ ನಿಯಂತ್ರಣ ಇರಬೇಕು ಎಂದರು.</p>.<p>ತಿಪ್ಪಾಯಿಕೊಪ್ಪದ ಮಹಾಂತ ದೇವರು ಮಾತನಾಡಿ, ‘ಶರಣ ಸಂಸ್ಕೃತಿ’ಯು ಪುರಾಣವಲ್ಲ. ಅದು, ಚಲನಶೀಲ, ಸದಾ ಬದುಕು ಮತ್ತು ಬದಲಾವಣೆಗೆ ಸ್ಪಂದಿಸುವ ಸಂಸ್ಕೃತಿ. ಪೂಜೆಗಾಗಿಯೇ ಪ್ರತ್ಯೇಕ ಸಮಯ ಮತ್ತು ಹಣದ ದುಂಧುವೆಚ್ಚ ಬೇಡ. ಕಾಯಕದಲ್ಲೇ ಭಗವಂತನ ಕಾಣಿರಿ. ದಾಸೋಹದಲ್ಲಿ ನೆಮ್ಮದಿ ಪಡೆಯಿರಿ ಎಂದರು.</p>.<p>ಸಾಮರಸ್ಯ, ಸಮಭಾವದ ಸಂದೇಶವನ್ನು ಸಹಜ ಶಿವಯೋಗ ನೀಡಿದೆ ಎಂದು ಚಿತ್ರಕಲಾವಿದ ಎಂ.ಡಿ. ರಫಿ ಹೇಳಿದರು. ಹೊಸಮಠದ ಚರಮೂರ್ತಿ ಬಸವಶಾಂತಲಿಂಗ ಸ್ವಾಮೀಜಿ, ಅಗಡಿ ತೋಟದ ಜಯದೇವ ಅಗಡಿ, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಡಾ.ಮೃತ್ಯುಂಜಯ ತುರಕಾಣಿ, ಉಪಾಧ್ಯಕ್ಷ ಇಂಧೂದರ ಯರೇಶಿಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong>ಬದುಕಿಗೆ ವಿಜ್ಞಾನ, ತಂತ್ರಜ್ಞಾನದ ಜೊತೆ ಧ್ಯಾನವೂ ಬಹುಮುಖ್ಯ. ಅಂಗವೇ ಲಿಂಗವಾಗುವ ಧ್ಯಾನದ ‘ಸಹಜ ಶಿವಯೋಗ’ವು ಕಾಣದ ಕಾಯಿಲೆಗಳಿಗೂ ಪರಿಹಾರ ನೀಡುತ್ತದೆ ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.</p>.<p>ಲಿಂ.ನೈಘಂಟಿನ ಸಿದ್ದಬಸವ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೋತ್ಸವದ ನಿಮಿತ್ತ ಇಲ್ಲಿನ ಹೊಸಮಠದಲ್ಲಿ ನಡೆಯುತ್ತಿರುವ ‘ಶರಣ ಸಂಸ್ಕೃತಿ ಉತ್ಸವ’ದಲ್ಲಿ ಶನಿವಾರ ಬೆಳಿಗ್ಗೆ ‘ಸಹಜ ಶಿವಯೋಗ’ದ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.</p>.<p>ಖಿನ್ನತೆಯು ಬಾಲ್ಯದಿಂದ ವೃದ್ಧಾಪ್ಯ ತನಕ ಸಾಮಾನ್ಯನಿಂದ ಸ್ವಾಮೀಜಿಗಳ ತನಕ ಎಲ್ಲರಿಗೂ ಕಾಡುವ ಕಾಯಿಲೆ. ಈ ಮಹಾಮಾರಿಯು ಹಲವರ ಬದುಕಗಳನ್ನೂ ಬಲಿ ಪಡೆದಿದೆ. ಇದು, ವೈದ್ಯಕೀಯ ಪರೀಕ್ಷೆಗಳಲ್ಲಿ ಪತ್ತೆಯಾಗದಿರಬಹುದು. ಆದರೆ, ಪರಿಣಾಮಕಾರಿ ಧ್ಯಾನದಿಂದ ಬಗೆಹರಿಸಬಹುದು ಎಂದರು.</p>.<p>ಒಳಗಿನ ಸಮಸ್ಯೆಗಳಿಗೆ ಹೊರಗೆ ಪರಿಹಾರ ಹುಡುಕಾಡಬೇಡಿ. ಅಂತರಂಗದಲ್ಲಿ ಪಾರಮಾರ್ಥ ತುಂಬಿಕೊಳ್ಳಿ. ಬದುಕೇ ಧ್ಯಾನವಾಗಲಿ, ಸಮಸ್ಯೆಗಳು ಕರಗಿ ಹೋಗುತ್ತವೆ ಎಂದರು.</p>.<p>ಪಾಶ್ಚಾತ್ಯದ ಸಿದ್ಧಾಂತಗಳು ತತ್ವಜ್ಞಾನ ನೀಡಿದರೆ, ಶರಣರು ತತ್ವಜ್ಞಾನದ ಜೊತೆ ಕಾಯಕವನ್ನು ನೀಡಿದ್ದಾರೆ. ಹೀಗಾಗಿ, ಧ್ಯಾನ, ಏಕಾಗ್ರತೆ, ಶಿಯೋಗಗಳನ್ನು ‘ಪಾರ್ಟ್ ಟೈಮ್ ’ ರೀತಿ ಮಾಡಬೇಡಿ. ಧ್ಯಾನದಲ್ಲಿ ಲೀನವಾಗಿ, ಕಣ್ಣಲ್ಲಿ ಭಾಷ್ಪ ತುಂಬುವಷ್ಟು ತಲ್ಲೀನರಾಗಿ ಎಂದರು.</p>.<p>ಅದಕ್ಕಾಗಿ ಸತ್ಯ ಶುದ್ಧ ಕಾಯಕ ಮಾಡಿ. ಸತ್ ಚಿಂತನೆ, ಸದ್ಭಾವನೆ, ಸದ್ವರ್ತನೆಗಳಿಂದ ಸನ್ಮಾರ್ಗ ಮತ್ತು ಯಶಸ್ಸು ಕಂಡುಕೊಳ್ಳಿ ಎಂದ ಅವರು, ಬಸವಣ್ಣನವರ ಮಾರ್ಗವನ್ನು ರಾಷ್ಟ್ರಕವಿ ಕುವೆಂಪು ಅವರು ‘ಋಜುಮಾರ್ಗ’ ಎಂದು ಕರೆದಿದ್ದಾರೆ ಎಂದರು.</p>.<p>ಹಾವನೂರು ದಳವಾಯಿ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ತನುವಿದ್ದಲ್ಲೇ ಮನ ಇರಬೇಕು. ನಮ್ಮ ಮನಸ್ಸಿನ ಮೇಲೆ ನಮಗೆ ನಿಯಂತ್ರಣ ಇರಬೇಕು ಎಂದರು.</p>.<p>ತಿಪ್ಪಾಯಿಕೊಪ್ಪದ ಮಹಾಂತ ದೇವರು ಮಾತನಾಡಿ, ‘ಶರಣ ಸಂಸ್ಕೃತಿ’ಯು ಪುರಾಣವಲ್ಲ. ಅದು, ಚಲನಶೀಲ, ಸದಾ ಬದುಕು ಮತ್ತು ಬದಲಾವಣೆಗೆ ಸ್ಪಂದಿಸುವ ಸಂಸ್ಕೃತಿ. ಪೂಜೆಗಾಗಿಯೇ ಪ್ರತ್ಯೇಕ ಸಮಯ ಮತ್ತು ಹಣದ ದುಂಧುವೆಚ್ಚ ಬೇಡ. ಕಾಯಕದಲ್ಲೇ ಭಗವಂತನ ಕಾಣಿರಿ. ದಾಸೋಹದಲ್ಲಿ ನೆಮ್ಮದಿ ಪಡೆಯಿರಿ ಎಂದರು.</p>.<p>ಸಾಮರಸ್ಯ, ಸಮಭಾವದ ಸಂದೇಶವನ್ನು ಸಹಜ ಶಿವಯೋಗ ನೀಡಿದೆ ಎಂದು ಚಿತ್ರಕಲಾವಿದ ಎಂ.ಡಿ. ರಫಿ ಹೇಳಿದರು. ಹೊಸಮಠದ ಚರಮೂರ್ತಿ ಬಸವಶಾಂತಲಿಂಗ ಸ್ವಾಮೀಜಿ, ಅಗಡಿ ತೋಟದ ಜಯದೇವ ಅಗಡಿ, ಉತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕಾರ್ಯಾಧ್ಯಕ್ಷ ಡಾ.ಮೃತ್ಯುಂಜಯ ತುರಕಾಣಿ, ಉಪಾಧ್ಯಕ್ಷ ಇಂಧೂದರ ಯರೇಶಿಮ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>