ಅಕ್ಕಿಆಲೂರ: ‘ಉರಿಬಿಸಿಲಿನಲ್ಲಿ ಇಷ್ಟು ಜನ ಸೇರಿದ್ದೀರಿ. ನಿಮಗೆ ನೆರಳು ಮಾಡಬೇಕು ಎಂದು ನಮಗೆ ಮನಸ್ಸಿದೆ. ಆದರೆ ಚುನಾವಣಾ ಆಯೋಗದವರು ಇಷ್ಟೇ ಖರ್ಚು ಮಾಡಿ, ಹೀಗೇ ಸಭೆ ಮಾಡಿ ಅಂತ ಹೇಳಿದ್ದಾರೆ. ಅದಕ್ಕೆ ನಿಮಗೆ ನೆರಳು ಮಾಡಲು ಆಗಿಲ್ಲ, ಕ್ಷಮಿಸಿ’ ಎಂದು ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ವೇಳೆ ಸೇರಿದ್ದ ಜನರಲ್ಲಿ ಕೇಳಿಕೊಂಡರು.