ಕರ್ನಾಟಕದಲ್ಲಿ 800 ವರ್ಷಗಳ ಹಿಂದೆಯೇ ಸಂತ–ಶರಣರು ಅಸಮಾನತೆ, ಅಜ್ಞಾನ, ಶೋಷಣೆ, ಮೂಢನಂಬಿಕೆಗಳ ವಿರುದ್ಧ ಬಂಡೆದ್ದು ಸಮತಾ ಸಮಾಜದ ದಾರಿ ತೋರಿದ್ದಾರೆ. ಅರಿವು, ಜ್ಞಾನ, ಪ್ರೇಮ, ಬಂಧುತ್ವ, ಅಹಿಂಸೆ, ಕರುಣೆ, ನ್ಯಾಯ, ಸಮಾನತೆ ಮುಂತಾದ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಈ ಕಾರಣದಿಂದ ಸಂತ–ಶರಣರ ಸಂದೇಶವನ್ನು ಜನರಿಗೆ ತಿಳಿಸಿ ಜಾಗೃತಿ ಉಂಟು ಮಾಡಲು ಯಾತ್ರೆ ಕೈಗೊಂಡಿದ್ದೇವೆ ಎಂದರು.