ಸಾರಿಗೆ ಬಸ್ಗಳನ್ನು ಅರ್ಧ ಗಂಟೆ ತಡೆದ ವಿದ್ಯಾರ್ಥಿಗಳು, ಬಸ್ ಕೊರತೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹಾವೇರಿಯಿಂದ ಕಡಕೋಳ ಮಾರ್ಗವಾಗಿ ಹೂವಿನಶಿಗ್ಲಿಗೆ ಸಂಜೆ 5 ಗಂಟೆಗೆ ಬಸ್ ಬಿಡಬೇಕು. ಇದರಿಂದ ಕಾಲೇಜು ವಿದ್ಯಾರ್ಥಿಗಳು ಊರು ತಲುಪಲು ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು.