ಗುರುವಾರ, 22 ಜನವರಿ 2026
×
ADVERTISEMENT
ADVERTISEMENT

ಹಾವೇರಿ | ಪದವೀಧರರ ಕ್ಷೇತ್ರ: ಕೈ–ಕಮಲ ಕಸರತ್ತು

ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆಗೆ ಸ್ವಪಕ್ಷದಲ್ಲೇ ಆಕ್ಷೇಪ: ಬಿಜೆಪಿಯಲ್ಲಿ ಮೂವರ ಹೆಸರು ಅಂತಿಮ- ಜೆಡಿಎಸ್‌ನಲ್ಲೂ ಅಭ್ಯರ್ಥಿ ಕಣಕ್ಕೆ?
Published : 22 ಜನವರಿ 2026, 2:28 IST
Last Updated : 22 ಜನವರಿ 2026, 2:28 IST
ಫಾಲೋ ಮಾಡಿ
Comments
ಆರ್.ಎಂ.ಕುಬೇರಪ್ಪ
ಆರ್.ಎಂ.ಕುಬೇರಪ್ಪ
ಬಸವರಾಜ ಗುರಿಕಾರ
ಬಸವರಾಜ ಗುರಿಕಾರ
ರಾಘವೇಂದ್ರ ಬಾಸೂರ
ರಾಘವೇಂದ್ರ ಬಾಸೂರ
ಭೋಜರಾಜ ಕರೂದಿ
ಭೋಜರಾಜ ಕರೂದಿ
ಎಸ್‌.ವಿ.ಸಂಕನೂರ
ಎಸ್‌.ವಿ.ಸಂಕನೂರ
ಲಿಂಗರಾಜ ಪಾಟೀಲ
ಲಿಂಗರಾಜ ಪಾಟೀಲ
ನಾವೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು. ಕಾಂಗ್ರೆಸ್‌ ಗೆಲ್ಲಿಸುವುದೇ ನಮ್ಮ ಗುರಿ. ಎಲ್ಲರನ್ನೂ ಪಕ್ಷದ ವರಿಷ್ಠರು ಸಮಾಧಾನಪಡಿಸುತ್ತಾರೆ
ಮೋಹನ ಲಿಂಬಿಕಾಯಿ ಕಾಂಗ್ರೆಸ್ ಅಭ್ಯರ್ಥಿ
ಶಾಸಕರು ಹಾಗೂ ಮುಖಂಡರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಏನೇ ಗೊಂದಲವಿದ್ದರೂ ಬಗೆಹರಿಸಿಕೊಳ್ಳಲಾಗುವುದು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವುದೊಂದೇ ನಮ್ಮ ಗುರಿ
ಸಲೀಂ ಅಹ್ಮದ್ ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ
‘ಕಾಂಗ್ರೆಸ್‌ ಕಾರ್ಯಕರ್ತರಿಗೆ ಮೋಸ’
‘ಒಂದು ದಿನವೂ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿಯದೇ ವಲಸೆ ಬಂದವರಿಗೆ ಟಿಕೆಟ್ ನೀಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೆ ಮೋಸ ಮಾಡಲಾಗಿದೆ’ ಎಂದು ಟಿಕೆಟ್ ಆಕಾಂಕ್ಷಿಯೂ ಆಗಿದ್ದ ಕೆಪಿಸಿಸಿ ಪದವೀಧರರ ಘಟಕದ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಬಾಸೂರು ಬಹಿರಂಗವಾಗಿ ಕಿಡಿಕಾರಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ‘10 ಸಾವಿರಕ್ಕೂ ಹೆಚ್ಚು ಮತದಾರರ ನೋಂದಣಿ ಮಾಡಿಸಿದ್ದೇನೆ. ಪಕ್ಷದ ಎಲ್ಲ ಹೋರಾಟ ಪ್ರತಿಭಟನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಈಗ ವಲಸಿಗರಿಗೆ ಟಿಕೆಟ್ ನೀಡಿರುವುದು ಖಂಡನೀಯ. ಅಭ್ಯರ್ಥಿಯನ್ನು ಬದಲಾವಣೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
‘ವೈಯಕ್ತಿಕ ನಿರ್ಧಾರ ಘೋಷಿಸುವೆ’
‘ಕಳೆದ ಚುನಾವಣೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದೆ. ಈ ಬಾರಿ ಕಾಂಗ್ರೆಸ್ ಶಾಸಕರು ಹೆಚ್ಚಿದ್ದಾರೆ. ನನಗೆ ಟಿಕೆಟ್ ನೀಡಿಲ್ಲ. ಕ್ಷೇತ್ರದಲ್ಲಿರುವ ಕಾರ್ಯಕರ್ತರ ಸಭೆ ನಡೆಸಿ ಸದ್ಯದಲ್ಲೇ ವೈಯಕ್ತಿಕ ನಿರ್ಧಾರ ಘೋಷಿಸುತ್ತೇವೆ’ ಎಂದು ಆರ್.ಎಂ. ಕುಬೇರಪ್ಪ ತಿಳಿಸಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುತ್ತಿರುವುದಕ್ಕೆ ನನಗೆ ಕೂಲಿ ಸಿಕ್ಕಿಲ್ಲ. ಶಾಸಕರು ಹಾಗೂ ಅಧಿಕಾರದಲ್ಲಿರುವವರು ನನ್ನನ್ನು ಯಾವುದಕ್ಕೂ ಪರಿಗಣಿಸುತ್ತಿಲ್ಲ. ಈ ಬಾರಿ ಸೂಕ್ತ ಸ್ಥಾನಮಾನ ಸಿಗಲೇ ಬೇಕು. ಇಲ್ಲದಿದ್ದರೆ ನನ್ನ ನಿರ್ಧಾರ ಅಚಲವಾಗಿರುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT