<p><strong>ಹಾನಗಲ್: </strong>`ಆರ್ಥಿಕ ಸಂಸ್ಥೆಗಳು ವಿಶ್ವಾಸ, ಪ್ರಾಮಾಣಿಕತೆ ಉಳಿಸಿಕೊಂಡರೆ ಮಾತ್ರ ಅವುಗಳ ಬೆಳವಣಿಗೆ ಸಾಧ್ಯವಿದ್ದು, ಅವ್ಯಹಾರ ಹಾಗೂ ಆರ್ಥಿಕ ಹಿಡಿತ ವಿಲ್ಲದ ಸಂಘ ಸಂಸ್ಥೆಗಳಿಗೆ ಭವಿಷ್ಯ ಇರು ವುದಿಲ್ಲ~ ಎಂದು ಜಿಪಂ ಸದಸ್ಯ ಪದ್ಮನಾಭ ಕುಂದಾಪುರ ಅಭಿಪ್ರಾಯಪಟ್ಟರು.<br /> <br /> ಹಾನಗಲ್ಲಿನಲ್ಲಿ ಭಾನುವಾರ ನಡೆದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಹಣದ ವಿಷಯದಲ್ಲಿ ಶುದ್ಧಹಸ್ತ ರಾಗಿರಬೇಕು. ಮುಖ್ಯವಾಗಿ ಶಿಕ್ಷಕರ ಪತ್ತಿನ ಸಂಘಗಳತ್ತ ಇಡೀ ಸಮಾಜ ತೆರೆದ ಕಣ್ಣಿನಿಂದ ನೋಡುತ್ತದೆ. ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಶಿಕ್ಷಕರು ತಮ್ಮ ಪತ್ತಿನ ಸಂಘವೂ ಕೂಡ ಆದರ್ಶವಾಗಿರುವಂತೆ ಜಾಗೃತಿವಹಿಸಿ ಮಾದರಿಯಾಗಬೇಕು~ ಎಂದು ಸಲಹೆ ನೀಡಿದರು.<br /> <br /> ಮುಖ್ಯ ಅತಿಥಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ. ಬಸವರಾಜಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. <br /> ಸಂಸ್ಥೆಯ ಅಧ್ಯಕ್ಷ ಎಂ.ಎ.ಜಾಗೀರ ದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕಿನ ಆರ್ಥಿಕ ಪ್ರಗತಿಯನ್ನು ವಿವರಿಸಿದರು.<br /> <br /> ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಜಿ. ಪಾಟೀಲ, ಉಪಾಧ್ಯಕ್ಷ ಲವಕುಮಾರ ಡಿ. ಜಿಲ್ಲಾ ಉಪಾಧ್ಯಕ್ಷ ಎಂ.ಎನ್.ಚಿಲಕ ವಾಡ, ಕಾರ್ಯದರ್ಶಿ ಬಿ.ಎಸ್.ಚಲ್ಲಾಳ, ಮುಂತಾದವರು ವೇದಿಕೆಯಲಿದ್ಲ್ದರು.<br /> <br /> ಸನ್ಮಾನ: ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಬಿ.ಮೇಲಿನ ಮನಿ, ಎ.ಬಿ.ದೀಕ್ಷಿತ, ಐ.ಬಿ.ಹೂಗಾರ, ಆರ್.ಎ.ಕೆಲೂರ, ಎಚ್.ಕೆ.ಗಡಾದ, ರಾಜ್ಯ ಮಟ್ಟದ ಬಸವಜ್ಯೋತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಶಿವಕುಮಾರ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.<br /> <br /> ಎಸ್.ಎಸ್.ಗೊಂದಿ ಸಂಗಡಿಗರು ಪ್ರಾರ್ಥನೆ ಹಾಡಿದರು. ಆರ್.ಎಫ್. ತಿರುಮಲೆ ಸ್ವಾಗತಿಸಿದರು. ಎಸ್.ಎಮ್.ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ದಿನೇಶ ಬೇದ್ರೆ ವಾರ್ಷಿಕ ವರದಿ ಓದಿದರು. ಜಯ ಲಕ್ಷ್ಮೀ. ಆರ್ ನಿರೂಪಿಸಿದರು. ಪಿ.ಎಂ. ಚಲವಾದಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್: </strong>`ಆರ್ಥಿಕ ಸಂಸ್ಥೆಗಳು ವಿಶ್ವಾಸ, ಪ್ರಾಮಾಣಿಕತೆ ಉಳಿಸಿಕೊಂಡರೆ ಮಾತ್ರ ಅವುಗಳ ಬೆಳವಣಿಗೆ ಸಾಧ್ಯವಿದ್ದು, ಅವ್ಯಹಾರ ಹಾಗೂ ಆರ್ಥಿಕ ಹಿಡಿತ ವಿಲ್ಲದ ಸಂಘ ಸಂಸ್ಥೆಗಳಿಗೆ ಭವಿಷ್ಯ ಇರು ವುದಿಲ್ಲ~ ಎಂದು ಜಿಪಂ ಸದಸ್ಯ ಪದ್ಮನಾಭ ಕುಂದಾಪುರ ಅಭಿಪ್ರಾಯಪಟ್ಟರು.<br /> <br /> ಹಾನಗಲ್ಲಿನಲ್ಲಿ ಭಾನುವಾರ ನಡೆದ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ಹಣದ ವಿಷಯದಲ್ಲಿ ಶುದ್ಧಹಸ್ತ ರಾಗಿರಬೇಕು. ಮುಖ್ಯವಾಗಿ ಶಿಕ್ಷಕರ ಪತ್ತಿನ ಸಂಘಗಳತ್ತ ಇಡೀ ಸಮಾಜ ತೆರೆದ ಕಣ್ಣಿನಿಂದ ನೋಡುತ್ತದೆ. ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವ ಶಿಕ್ಷಕರು ತಮ್ಮ ಪತ್ತಿನ ಸಂಘವೂ ಕೂಡ ಆದರ್ಶವಾಗಿರುವಂತೆ ಜಾಗೃತಿವಹಿಸಿ ಮಾದರಿಯಾಗಬೇಕು~ ಎಂದು ಸಲಹೆ ನೀಡಿದರು.<br /> <br /> ಮುಖ್ಯ ಅತಿಥಿಯಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಮಾರುತಿ ಶಿಡ್ಲಾಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಬಿ. ಬಸವರಾಜಪ್ಪ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು. <br /> ಸಂಸ್ಥೆಯ ಅಧ್ಯಕ್ಷ ಎಂ.ಎ.ಜಾಗೀರ ದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕಿನ ಆರ್ಥಿಕ ಪ್ರಗತಿಯನ್ನು ವಿವರಿಸಿದರು.<br /> <br /> ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಜಿ. ಪಾಟೀಲ, ಉಪಾಧ್ಯಕ್ಷ ಲವಕುಮಾರ ಡಿ. ಜಿಲ್ಲಾ ಉಪಾಧ್ಯಕ್ಷ ಎಂ.ಎನ್.ಚಿಲಕ ವಾಡ, ಕಾರ್ಯದರ್ಶಿ ಬಿ.ಎಸ್.ಚಲ್ಲಾಳ, ಮುಂತಾದವರು ವೇದಿಕೆಯಲಿದ್ಲ್ದರು.<br /> <br /> ಸನ್ಮಾನ: ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಎಸ್.ಬಿ.ಮೇಲಿನ ಮನಿ, ಎ.ಬಿ.ದೀಕ್ಷಿತ, ಐ.ಬಿ.ಹೂಗಾರ, ಆರ್.ಎ.ಕೆಲೂರ, ಎಚ್.ಕೆ.ಗಡಾದ, ರಾಜ್ಯ ಮಟ್ಟದ ಬಸವಜ್ಯೋತಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಟಿ.ಶಿವಕುಮಾರ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.<br /> <br /> ಎಸ್.ಎಸ್.ಗೊಂದಿ ಸಂಗಡಿಗರು ಪ್ರಾರ್ಥನೆ ಹಾಡಿದರು. ಆರ್.ಎಫ್. ತಿರುಮಲೆ ಸ್ವಾಗತಿಸಿದರು. ಎಸ್.ಎಮ್.ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ದಿನೇಶ ಬೇದ್ರೆ ವಾರ್ಷಿಕ ವರದಿ ಓದಿದರು. ಜಯ ಲಕ್ಷ್ಮೀ. ಆರ್ ನಿರೂಪಿಸಿದರು. ಪಿ.ಎಂ. ಚಲವಾದಿ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>