ಕೆಲ ದಿನಗಳಿಂದ ಬಂದ್ ಆಗಿದ್ದ ಮುದೇನೂರು ಗ್ರಾಮದ ಮರಳು ದಾಸ್ತಾನು ಘಟಕವನ್ನು ಆರಂಭಿಸುವ ಸಲುವಾಗಿ ಉಪವಿಭಾಗಾಧಿಕಾರಿ ಲೋಕೇಶ ಬಂದಿದ್ದರು. ಆಗ, ಅವರನ್ನು ಪ್ರಶ್ನಿಸಿದ ರೈತ ಶಂಕರಗೌಡ ಚಂದ್ರಶೇಖರಗೌಡ ಗಂಗನಗೌಡ್ರ ಅವರಿಗೆ ಕಾಲಿನಿಂದ ಒದ್ದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದರು. ಅಲ್ಲದೇ, ಘೇರಾವ್ ಹಾಕಿ ಪ್ರತಿಭಟಿಸಿದ್ದರು.