ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರಿ ಅಥವಾ ಸರ್ಕಾರೇತರ ಸಂಸ್ಥೆಯ ಮೂಲಕ ತರಬೇತಿ ಕೊಡಿಸಿ ಬ್ಯಾಂಕುಗಳೊಂದಿಗೆ ಸಂಪರ್ಕ ಏರ್ಪಡಿಸಿ ಸ್ವ-ಉದ್ಯೋಗ ಪ್ರಾರಂಭಿಸಲು ಸಾಲ ದೊರಕಿಸಿ ಕೊಡಲಾಗುವುದು ಎಂದರು. ತರಬೇತಿ ಫೆಬ್ರುವರಿ ೨೦ರವರೆಗೆ ನಡೆಯಲಿದ್ದು ಪ್ರತಿದಿನ ಒಂದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿರುದ್ಯೋಗಿಗಳುತರಬೇತಿ ಪಡೆಯುವರು. ವ್ಯವಸ್ಥಾಪಕ ಬಸವರಾಜ ಶೀಡೇನೂರ, ಸಿ.ಎಸ್.ಬಣಕಾರ, ಶಿವಾನಂದ ಕಮ್ಮಾರ ತರಬೇತಿ ನೀಡಿದರು.