ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ಆಧುನಿಕ ಮಾಯಾಜಾಲಕ್ಕೆ ಸಿಲುಕಿರುವ ಜನಸಮೂಹ ಮತ್ತೆ ನಮ್ಮ ಜಾನಪದ ಕಲೆ, ಆಟ, ಸಂಪ್ರದಾಯಗಳತ್ತ ಆಕರ್ಷಿತರಾಗುತ್ತಿದ್ದಾರೆ. ಮತ್ತೆ ಕಟ್ಟುವ ಕೆಲಸಗಳು ಕೆಲಸಕ್ಕೆ ಬಾರದ ಹರಟೆಯಿಂದ ಸಾಧ್ಯವಾಗದು. ಆಸಕ್ತಿ ಮತ್ತು ಕುತೂಹಲ ಕೆರಳಿಸುವ ಪ್ರಯತ್ನ ನಡೆಯಬೇಕು. ಹೊಸ ತಲೆಮಾರಿಗೆ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.
ಈ ಸಮಯದಲ್ಲಿ ಲಗೋರಿ, ಚಿನ್ನಿದಾಂಡು, ಬುಗುರಿ, ಗೋಲಿ, ಹಗ್ಗ ಜಗ್ಗಾಟ, ಮಡಕೆ ಒಡೆಯುವುದು, ಗೋಣಿಚೀಲ ಓಟ, ಕುಂಟ ಪಿಲ್ಲೆ, ಚನ್ನೇಮಣೆ, ಚೌಕಾಬಾರ, ಹಗ್ಗ ಜಿಗಿತ, ಮೂರುಕಾಲಿನ ಓಟ ಸ್ಪರ್ಧೇಗಳು ನಡೆದವು. ಜನಪದ ಹಾಡು, ಸೋಬಾನೆ ಪದ, ಬೀಸುವಪದ ಗೀಗಿಪದ ಸೇರಿದಂತೆ ಹಲವು ಕಲೆಗಳ ಪ್ರದರ್ಶನ ನಡೆಯಿತು.