ಲೋಕಕಲ್ಯಾಣಕ್ಕಾಗಿಯೂ ಆರ್ಯವೈಶ್ಯ ಸಮಾಜದ ಹಿರಿಯರು ಜಾರಿಗೆ ತಂದ ಪದ್ಧತಿ ಇದಾಗಿದೆ. ಅರಸಿಣ ಬೋಟ್ಟು 125 ಕೆ.ಜಿ, ಅಕ್ಕಿ 125 ಕೆ.ಜಿ, ಎಳ್ಳು 25 ಕೆ.ಜಿ, ಬೆಲ್ಲ 25 ಕೆ.ಜಿ, ಕುಂಕುಮ 11 ಕೆ.ಜಿ ಸೇರಿದಂತೆ ತುಳಸಿ, ಬೀಸುಕಲ್ಲು, ತುಂಬಿದ ಕೊಡ, ಬೀಗತಿ ಕೊಡ, ಗೋಮಾತೆ, ಮುತ್ತು, ಹವಳ, ಊದುಬತ್ತಿ ಎಲ್ಲವನ್ನೂ ಸೇರಿಸಲಾಗುತ್ತದೆ. ನಂತರ ಹಿಡಿಯಷ್ಟು ವಸ್ತುಗಳನ್ನು ಬಾಗಿನದಲ್ಲಿ ನೀಡುವ ಪದ್ಧತಿ ರೂಢಿಯಲ್ಲಿದೆ’ ಎಂದು ಮುತ್ತೈದೆ ಸುಜಾತಾ ವಿದ್ಯಾಸಾಗರ ವನಮಾಲಿ ಹೇಳಿದರು.
‘ಈ ಬಾಗಿನವನ್ನು ಬೃಂದಾವನ, ಅರಸಿಣ, ಕುಂಕುಮ, ಮುತ್ತು ಹವಳ, ಯಲ್ಲಮ್ಮ, ಬೀಸಕಲ್ಲು, ಒಳಕಲ್ಲು, ರೇವಗ್ಗಿ, ಬೀಗತಿ ಎಂಬ ಹದಿನಾರು ಹೆಸರುಗಳಿಂದ ಕರೆಯಲಾಗುತ್ತದೆ’ ಎಂದು ಅವರು ತಿಳಿಸಿದರು.