ಭಾಷಣಕಾರರಾಗಿ ಆಗಮಿಸಿದ್ದ ಎಐಯುಟಿಯುಸಿ ಜಿಲ್ಲಾ ಘಟಕದ ಉಪಾಧ್ಯಕ್ಷ ರಾಘವೇಂದ್ರ ಮಾತನಾಡಿ, ‘ಇಂದು ಜಾಗತಿಕವಾಗಿ ಅಮೆರಿಕ, ಮತ್ತಿತರ ಸಾಮ್ರಾಜ್ಯಶಾಹಿ ದೇಶಗಳ ದುರಾಕ್ರಮಣ, ದಾಳಿ, ಆರ್ಥಿಕ ದಿಗ್ಬಂಧನ, ಸಣ್ಣಪುಟ್ಟ ಪ್ರಾದೇಶಿಕ ಯುದ್ಧಗಳನ್ನು ಹುಟ್ಟುಹಾಕುತ್ತಿರುವ ಸಂದರ್ಭದಲ್ಲಿ ಡಬ್ಲ್ಯುಎಫ್ಟಿಯು ಪಾತ್ರ ಹೆಚ್ಚಿದೆ. ಆದ್ದರಿಂದ ನಮ್ಮ ದೇಶವೂ ಸೇರಿದಂತೆ ಎಲ್ಲಾ ದೇಶಗಳ ದುಡಿಯುವ ಜನತೆ; ವಿಶ್ವದ ಕಾರ್ಮಿಕ ವರ್ಗದ ಮಹಾನ್ ನಾಯಕರಾದ ಕಾರ್ಲ್ ಮಾರ್ಕ್ಸ್ ಅವರ ವಿಶ್ವದ ಕಾರ್ಮಿಕರೇ ಒಂದಾಗಿ’ ಎಂಬ ಉದ್ಘೋಷದ ಆಧಾರದ ಮೇಲೆ ಒಂದಾಗಬೇಕಿದೆ’ ಎಂದರು.