<p><strong>ಅಫಜಲಪುರ</strong>: ಪುರಸಭೆಯಲ್ಲಿ 18 ತಿಂಗಳುಗಳಲ್ಲಿ ಬರೋಬ್ಬರಿ 8 ಮುಖ್ಯಾಧಿಕಾರಿಗಳು ಹಾಗೂ 3 ಕಿರಿಯ ಎಂಜಿನಿಯರ್ಗಳ ವರ್ಗಾವಣೆಯಾಗಿದೆ. ಇದೇ ಕಾರಣಕ್ಕಾಗಿ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.</p>.<p>ಮುಖ್ಯಾಧಿಕಾರಿಗಳಾದ ಕೈಸರ್ ಹುಸೇನಿ, ಬಾಬುರಾವ ಮೇಲಿನಕೇರಿ, ಅಶೋಕ ಬಿಲಗುಂದಿ ಎರಡೆರಡೂ ಬಾರಿ ವರ್ಗಾವಣೆ ಆಗಿದ್ದಾರೆ. ಈಚೆಗೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರು 3 ತಿಂಗಳ ಹಿಂದೆ ವರ್ಗಾವಣೆ ಆಗಿದ್ದಾರೆ. ಸದ್ಯ ಮುಖ್ಯಾಧಿಕಾರಿಯಾಗಿ ಸುರೇಶ ಬಬಲಾದ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.</p>.<p>ಕಿರಿಯ ಎಂಜನಿಯರ್ಗಳ ವರ್ಗಾ ವಣೆಯೂ ನಡೆದಿದೆ. ಶಾಂತಪ್ಪ ಹೊಸೂರ, ದೇವೆಂದ್ರಪ್ಪ, ಲೋಕೇಶ ಅವರ ವರ್ಗಾವಣೆಯಾಗಿದೆ. ಸದ್ಯಕ್ಕೆ ಎಸ್.ಸಿ. ಸೊಂಪುರ ಎಂಬುವವರು ಕಿರಿಯ ಎಂಜನಿಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.</p>.<p>ಹೊಸಬರು ಅಧಿಕಾರ ವಹಿಸಿ ಕೊಂಡ ಮೇಲೆ, ಬ್ಯಾಂಕ್ ಖಾತೆ ಬದಲಾ ವಣೆ ಸೇರಿ ಇತರ ದಾಖಲೆಗಳ ಹೆಸರು ಬದಲಾಗಬೇಕು. ಜತೆಗೆ ಸಿಬ್ಬಂದಿ ಸಭೆ ಕರೆದು, ಅಭಿವೃದ್ಧಿ ಆರಂಭಿಸಬೇಕು ಎನ್ನುವಷ್ಟರಲ್ಲಿಯೇ ವರ್ಗಾವಣೆ ಆಗಿರು ತ್ತದೆ. ಈ ಹಿಂದೆ ವರ್ಗಾವಣೆ ಆಗಿರುವ ಅಶೋಕ ಬಿಲಗುಂದಿ ಅವರು ತಮ್ಮ ವರ್ಗಾವಣೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.</p>.<p>ಪುರಸಭೆ ಅಧ್ಯಕ್ಷೆ ರೇಣುಕಾ ರಾಜಶೇಖರ ಪಾಟೀಲ ಮಾಹಿತಿ ನೀಡಿ, ‘ಎಸ್ಎಫ್ಸಿ ಮುಖ್ಯಸ್ಥರಿಂದ ಪುರಸಭೆಗೆ ₹ 4 ಕೋಟಿ ಹಾಗೂ ನಗರೋತ್ಥಾನ ಅಡಿಯಲ್ಲಿ₹ 10 ಕೋಟಿ ಅನುದಾನ ಬಂದಿದೆ. ಅದನ್ನು ಕ್ರಿಯಾ ಯೋಜನೆ ಮಾಡಿ ಅನುಮೋದನೆಗೆ ಕಳುಹಿಸಲಾಗಿದೆ. ಸದ್ಯ ಟೆಂಡರ್ ಕರೆಯಬೇಕಿತ್ತು. ಆದರೆ ದಿಢೀರನೆ ಮುಖ್ಯಾಧಿಕಾರಿಗಳ ವರ್ಗಾವಣೆಯಾಗಿದ್ದರಿಂದ ಕಾಮಗಾರಿ ಗಳು ಸ್ಥಗಿತಗೊಂಡಿವೆ’ ಎಂದು ಹೇಳಿದ್ದಾರೆ.</p>.<p>ಸರ್ಕಾರ ಮಟ್ಟದಲ್ಲಿ ವರ್ಗಾವಣೆಗೆ ನಿಯಮ ಇರಬೇಕು. ಅಧಿಕಾರಿಗಳು ವರ್ಗಾವಣೆಯಾಗಿ ಬಂದ ಮೇಲೆ ಕನಿಷ್ಠ 2 ವರ್ಷವಾದರೂ ಕೆಲಸ ಮಾಡಬೇಕು. ಮೇಲಿಂದ ಮೇಲೆ ವರ್ಗಾವಣೆ ಆಗುವುದರಿಂದ ಅಭಿ ವೃದ್ಧಿ ಕುಂಠಿತವಾಗುತ್ತಿದೆ. ಜನ ಪ್ರತಿನಿಧಿಗಳು ಇಲ್ಲಿಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನಾ ದರೂ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ</strong>: ಪುರಸಭೆಯಲ್ಲಿ 18 ತಿಂಗಳುಗಳಲ್ಲಿ ಬರೋಬ್ಬರಿ 8 ಮುಖ್ಯಾಧಿಕಾರಿಗಳು ಹಾಗೂ 3 ಕಿರಿಯ ಎಂಜಿನಿಯರ್ಗಳ ವರ್ಗಾವಣೆಯಾಗಿದೆ. ಇದೇ ಕಾರಣಕ್ಕಾಗಿ ಪಟ್ಟಣದ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.</p>.<p>ಮುಖ್ಯಾಧಿಕಾರಿಗಳಾದ ಕೈಸರ್ ಹುಸೇನಿ, ಬಾಬುರಾವ ಮೇಲಿನಕೇರಿ, ಅಶೋಕ ಬಿಲಗುಂದಿ ಎರಡೆರಡೂ ಬಾರಿ ವರ್ಗಾವಣೆ ಆಗಿದ್ದಾರೆ. ಈಚೆಗೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಅವರು 3 ತಿಂಗಳ ಹಿಂದೆ ವರ್ಗಾವಣೆ ಆಗಿದ್ದಾರೆ. ಸದ್ಯ ಮುಖ್ಯಾಧಿಕಾರಿಯಾಗಿ ಸುರೇಶ ಬಬಲಾದ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.</p>.<p>ಕಿರಿಯ ಎಂಜನಿಯರ್ಗಳ ವರ್ಗಾ ವಣೆಯೂ ನಡೆದಿದೆ. ಶಾಂತಪ್ಪ ಹೊಸೂರ, ದೇವೆಂದ್ರಪ್ಪ, ಲೋಕೇಶ ಅವರ ವರ್ಗಾವಣೆಯಾಗಿದೆ. ಸದ್ಯಕ್ಕೆ ಎಸ್.ಸಿ. ಸೊಂಪುರ ಎಂಬುವವರು ಕಿರಿಯ ಎಂಜನಿಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.</p>.<p>ಹೊಸಬರು ಅಧಿಕಾರ ವಹಿಸಿ ಕೊಂಡ ಮೇಲೆ, ಬ್ಯಾಂಕ್ ಖಾತೆ ಬದಲಾ ವಣೆ ಸೇರಿ ಇತರ ದಾಖಲೆಗಳ ಹೆಸರು ಬದಲಾಗಬೇಕು. ಜತೆಗೆ ಸಿಬ್ಬಂದಿ ಸಭೆ ಕರೆದು, ಅಭಿವೃದ್ಧಿ ಆರಂಭಿಸಬೇಕು ಎನ್ನುವಷ್ಟರಲ್ಲಿಯೇ ವರ್ಗಾವಣೆ ಆಗಿರು ತ್ತದೆ. ಈ ಹಿಂದೆ ವರ್ಗಾವಣೆ ಆಗಿರುವ ಅಶೋಕ ಬಿಲಗುಂದಿ ಅವರು ತಮ್ಮ ವರ್ಗಾವಣೆ ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.</p>.<p>ಪುರಸಭೆ ಅಧ್ಯಕ್ಷೆ ರೇಣುಕಾ ರಾಜಶೇಖರ ಪಾಟೀಲ ಮಾಹಿತಿ ನೀಡಿ, ‘ಎಸ್ಎಫ್ಸಿ ಮುಖ್ಯಸ್ಥರಿಂದ ಪುರಸಭೆಗೆ ₹ 4 ಕೋಟಿ ಹಾಗೂ ನಗರೋತ್ಥಾನ ಅಡಿಯಲ್ಲಿ₹ 10 ಕೋಟಿ ಅನುದಾನ ಬಂದಿದೆ. ಅದನ್ನು ಕ್ರಿಯಾ ಯೋಜನೆ ಮಾಡಿ ಅನುಮೋದನೆಗೆ ಕಳುಹಿಸಲಾಗಿದೆ. ಸದ್ಯ ಟೆಂಡರ್ ಕರೆಯಬೇಕಿತ್ತು. ಆದರೆ ದಿಢೀರನೆ ಮುಖ್ಯಾಧಿಕಾರಿಗಳ ವರ್ಗಾವಣೆಯಾಗಿದ್ದರಿಂದ ಕಾಮಗಾರಿ ಗಳು ಸ್ಥಗಿತಗೊಂಡಿವೆ’ ಎಂದು ಹೇಳಿದ್ದಾರೆ.</p>.<p>ಸರ್ಕಾರ ಮಟ್ಟದಲ್ಲಿ ವರ್ಗಾವಣೆಗೆ ನಿಯಮ ಇರಬೇಕು. ಅಧಿಕಾರಿಗಳು ವರ್ಗಾವಣೆಯಾಗಿ ಬಂದ ಮೇಲೆ ಕನಿಷ್ಠ 2 ವರ್ಷವಾದರೂ ಕೆಲಸ ಮಾಡಬೇಕು. ಮೇಲಿಂದ ಮೇಲೆ ವರ್ಗಾವಣೆ ಆಗುವುದರಿಂದ ಅಭಿ ವೃದ್ಧಿ ಕುಂಠಿತವಾಗುತ್ತಿದೆ. ಜನ ಪ್ರತಿನಿಧಿಗಳು ಇಲ್ಲಿಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನಾ ದರೂ ಜನಪ್ರತಿನಿಧಿಗಳು ಎಚ್ಚರ ವಹಿಸಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>