‘ಹಳಗನ್ನಡ, ನಡುಗನ್ನಡದ ಶೇ 75ರಷ್ಟು ಸಾಹಿತ್ಯ ಸೃಷ್ಟಿಯಾಗಿದ್ದೇ ಕಲ್ಯಾಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕದಲ್ಲಿ. ರನ್ನ, ಪೊನ್ನ, ಪಂಪ, ಜನ್ನ, ಸರ್ವಜ್ಞ, ದಾಸರು ಈ ಭಾಗಕ್ಕೆ ಸೇರಿದವರು. ಆ ಸಾಹಿತ್ಯ ಸೃಷ್ಟಿಯನ್ನು ಮುಂದುವರಿಸಿಕೊಂಡು ಬಂದವರು ಈಗಲೂ ಇದ್ದಾರೆ. ಇಲ್ಲಿನವರನ್ನು ಆಯ್ಕೆ ಮಾಡದೆ ಕಸಾಪ ಮತ್ತೆ ಮಲತಾಯಿ ಧೋರಣೆ ತಳೆದಿದೆ. ಸಿದ್ದಯ್ಯ ಪುರಾಣಿಕ ಹಾಗೂ ಶಾಂತರಸರು ಮಾತ್ರ ಇಲ್ಲಿ ನಡೆದ ಸಮ್ಮೇಳನಗಳ ಅಧ್ಯಕ್ಷರಾಗಿದ್ದರು. ಆ ನಂತರ ಮತ್ತೆ ಅವಕಾಶ ಸಿಕ್ಕಿಲ್ಲ’ ಎಂದು ಡಾ.ಅಲ್ಲಮಪ್ರಭು
ಹೇಳಿದರು.