<p><strong>ಅಫಜಲಪುರ:</strong> ಸಂಕ್ರಮಣ ನಿಮಿತ್ತ ಪಟ್ಟಣದ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಪಟ್ಟಣದ ಬಸ್ ಡಿಪೊ ಹಿಂಬದಿಯ ಕ್ರೀಡಾಂಗಣದಲ್ಲಿ ತರಬಂಡಿ (ಎತ್ತಿನ ಬಂಡಿ) ಸ್ಪರ್ಧೆ ಜರುಗಿತು.</p>.<p>ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ಧವು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಣ್ಣೂರು ಗ್ರಾಮದ ಉಸ್ಮಾನ್ ಸಾಬ್ ಶೇಷಗಿರಿ ಅವರ ಎತ್ತುಗಳು ಪಡೆಯುವ ಮೂಲಕ ₹25,000 ಬಹುಮಾನವನ್ನು ಮುಡಿಗೇರಿಸಿಕೊಂಡಿತು. </p>.<p>ದ್ವಿತೀಯ ಸ್ಥಾನವನ್ನು ಬಂದ್ರವಾಡ ಗ್ರಾಮದ ಭೂತಾಳಿ ಬಿಂಗೆ ಅವರು ಎತ್ತುಗಳು ₹11,000 ಬಹುಮಾನ, ತೃತೀಯ ಸ್ಥಾನವನ್ನು ಪಟ್ಟಣದ ರಾಹುಲ್ ನೂಲಾ ಅವರ ಎತ್ತುಗಳು (₹5 ಸಾವಿರ ಬಹುಮಾನ) ಪಡೆದುಕೊಂಡವು. </p>.<p>ವೇದಿಕೆ ಕಾರ್ಯಕ್ರಮದಲ್ಲಿ ಪಟ್ಟಣ ಗುರು ಮಳೇಂದ್ರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಮಾತನಾಡಿ, ‘ ಇಂತಹ ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದರಿಂದ ಎತ್ತುಗಳ ಸಂತತಿ ಉಳಿದುಕೊಳ್ಳುತ್ತದೆ. ಮುಂದಿನ ಪೀಳಿಗೆಗೆ ಇದು ಮಾದರಿಯಾಗುತ್ತದೆ. ಸರ್ಕಾರವು ಇಂತಹ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡಬೇಕು’ ಎಂದರು.</p>.<p>ಮುಖಂಡ ಸಂಗ್ರಾಮಗೌಡ ಪಾಟೀಲ ಮಾತನಾಡಿ, ‘ಇತ್ತೀಚೆಗೆ ಕೃಷಿ ವಲಯದಲ್ಲಿ ಜಾನುವಾರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಇಂಥ ಎತ್ತುಗಳ ಸ್ಪರ್ಧೆ ಏರ್ಪಡಿಸುವುದರಿಂದ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದು ಒಳ್ಳೆಯ ಕಾರ್ಯಕ್ರಮ’ ಎಂದರು.</p>.<p>ರೈತ ಮುಖಂಡರಾದ ಚಂದ್ರಶೇಖರ್ ಕರಜಿಗಿ, ಚಂದ್ರಾಮ ಒಳಗೊಂಡ, ರಾಜಶೇಖರ ಹಿರೇಮಠ, ವೀರೇಶ, ಚಿದಾನಂದ ಮಠ, ಬಸಯ್ಯ ನಂದಿಕೋಲ, ಮುರಗೇಂದ್ರ ಮಸಳಿ, ಮಲ್ಲು ಬೆಳಗುಂಡಿ, ವಿಶ್ವನಾಥ್ ಕರಜಿಗಿ, ಧನ್ಯ ಕುಮಾರ್ ಭಸ್ಮೆ , ಚಂದ್ರಶೇಖರ್ ಕೆಂಗನಾಳ, ಸಕಲೇಶ್ ಪಾಟೀಲ, ಸುರೇಶ್ ಅವಟೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಫಜಲಪುರ:</strong> ಸಂಕ್ರಮಣ ನಿಮಿತ್ತ ಪಟ್ಟಣದ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಪಟ್ಟಣದ ಬಸ್ ಡಿಪೊ ಹಿಂಬದಿಯ ಕ್ರೀಡಾಂಗಣದಲ್ಲಿ ತರಬಂಡಿ (ಎತ್ತಿನ ಬಂಡಿ) ಸ್ಪರ್ಧೆ ಜರುಗಿತು.</p>.<p>ಎತ್ತಿನ ಬಂಡಿ ಓಟದ ಸ್ಪರ್ಧೆಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ಧವು. ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಣ್ಣೂರು ಗ್ರಾಮದ ಉಸ್ಮಾನ್ ಸಾಬ್ ಶೇಷಗಿರಿ ಅವರ ಎತ್ತುಗಳು ಪಡೆಯುವ ಮೂಲಕ ₹25,000 ಬಹುಮಾನವನ್ನು ಮುಡಿಗೇರಿಸಿಕೊಂಡಿತು. </p>.<p>ದ್ವಿತೀಯ ಸ್ಥಾನವನ್ನು ಬಂದ್ರವಾಡ ಗ್ರಾಮದ ಭೂತಾಳಿ ಬಿಂಗೆ ಅವರು ಎತ್ತುಗಳು ₹11,000 ಬಹುಮಾನ, ತೃತೀಯ ಸ್ಥಾನವನ್ನು ಪಟ್ಟಣದ ರಾಹುಲ್ ನೂಲಾ ಅವರ ಎತ್ತುಗಳು (₹5 ಸಾವಿರ ಬಹುಮಾನ) ಪಡೆದುಕೊಂಡವು. </p>.<p>ವೇದಿಕೆ ಕಾರ್ಯಕ್ರಮದಲ್ಲಿ ಪಟ್ಟಣ ಗುರು ಮಳೇಂದ್ರ ಸಂಸ್ಥಾನ ಹಿರೇಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರ ಮಾತನಾಡಿ, ‘ ಇಂತಹ ಕಾರ್ಯಕ್ರಮದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಇದರಿಂದ ಎತ್ತುಗಳ ಸಂತತಿ ಉಳಿದುಕೊಳ್ಳುತ್ತದೆ. ಮುಂದಿನ ಪೀಳಿಗೆಗೆ ಇದು ಮಾದರಿಯಾಗುತ್ತದೆ. ಸರ್ಕಾರವು ಇಂತಹ ಕಾರ್ಯಕ್ರಮಗಳಿಗೆ ಸಹಾಯ ಸಹಕಾರ ನೀಡಬೇಕು’ ಎಂದರು.</p>.<p>ಮುಖಂಡ ಸಂಗ್ರಾಮಗೌಡ ಪಾಟೀಲ ಮಾತನಾಡಿ, ‘ಇತ್ತೀಚೆಗೆ ಕೃಷಿ ವಲಯದಲ್ಲಿ ಜಾನುವಾರಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಇಂಥ ಎತ್ತುಗಳ ಸ್ಪರ್ಧೆ ಏರ್ಪಡಿಸುವುದರಿಂದ ರೈತರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಇದು ಒಳ್ಳೆಯ ಕಾರ್ಯಕ್ರಮ’ ಎಂದರು.</p>.<p>ರೈತ ಮುಖಂಡರಾದ ಚಂದ್ರಶೇಖರ್ ಕರಜಿಗಿ, ಚಂದ್ರಾಮ ಒಳಗೊಂಡ, ರಾಜಶೇಖರ ಹಿರೇಮಠ, ವೀರೇಶ, ಚಿದಾನಂದ ಮಠ, ಬಸಯ್ಯ ನಂದಿಕೋಲ, ಮುರಗೇಂದ್ರ ಮಸಳಿ, ಮಲ್ಲು ಬೆಳಗುಂಡಿ, ವಿಶ್ವನಾಥ್ ಕರಜಿಗಿ, ಧನ್ಯ ಕುಮಾರ್ ಭಸ್ಮೆ , ಚಂದ್ರಶೇಖರ್ ಕೆಂಗನಾಳ, ಸಕಲೇಶ್ ಪಾಟೀಲ, ಸುರೇಶ್ ಅವಟೆ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>