ರಾಜಶೇಖರ ಹಿರೇಮಠ ಮಾತನಾಡಿ, ‘ಸೆನ್ಸರ್ ಆಧರಿತ ಮಾಹಿತಿ ನೀಡುವ ವ್ಯವಸ್ಥೆಯನ್ನು ರೂಪಿಸಲಾಗುತ್ತಿದ್ದು, ಪ್ರತಿ ಎಕರೆಗೆ ಸುಮಾರು ಐದಾರು ಸಾವಿರ ವೆಚ್ಚದಲ್ಲಿ ಎಂಟು ಸೆನ್ಸರ್ಗಳನ್ನು ಅಳವಡಿಸಬಹುದು. ಇದರಿಂದ ರೈತರಿಗೆ ನಿಖರವಾದ ಹವಾಮಾನ ಮಾಹಿತಿ, ಮಣ್ಣು, ನೀರು, ಕೀಟನಾಶಕ ಮತ್ತು ರಸಗೊಬ್ಬರಗಳ ಬಳಕೆ, ನೀರು ಸಂಗ್ರಹ ಮಾಡುವ ಮಾಹಿತಿಯನ್ನು ಮೊಬೈಲ್ ಮೂಲಕ ಪಡೆಯಬಹುದು. ನಿಖರ ದತ್ತಾಂಶಗಳ ವಿಶ್ಲೇಷಣೆ ಮತ್ತು ಸಂಸ್ಕರಣೆಯು ನೈಸರ್ಗಿಕ ಸಂಪನ್ಮೂಲಗಳ ಮೂಲಕ ನಡೆಯುವುದರಿಂದ ಎಷ್ಟು ಪ್ರಮಾಣದಲ್ಲಿ ಗೊಬ್ಬರ, ಔಷಧ ಬಳಕೆ ಮಾಡಬೇಕು, ಕೀಟಗಳ ನಿರ್ವಹಣೆ ಹೀಗೆ ಪ್ರತಿಯೊಂದನ್ನೂ ನಿಖರವಾಗಿ ತಿಳಿಸಿಕೊಡಲಿದೆ’ ಎಂದು ವಿವರಿಸಿದರು.