<p><strong>ಆಳಂದ:</strong> ‘ರೈತ ಮತ್ತು ಬಡಕೂಲಿಕಾರ್ಮಿಕ ವಿರೋಧಿಯಾದ ವಿಬಿ-ಜಿ ರಾಮ ಜಿ ಮಸೂದೆ ಜಾರಿಗೊಳ್ಳುಸುತ್ತಿರುವ ಕೇಂದ್ರ ಸರ್ಕಾರವು ತಕ್ಷಣ ಈ ಕಾಯಿದೆ ರದ್ದು ಪಡೆಸಬೇಕು’ ಎಂದು ಜನವಾದಿ ಮಹಿಳಾ ಸಂಘಟನೆಯ ಹೋರಾಟಗಾರ್ತಿ ಕೆ.ನೀಲಾ ಒತ್ತಾಯಿಸಿದರು.</p>.<p>ಪಟ್ಟಣದ ತಾಲ್ಲೂಕು ಪಂಚಾಯಿತಿ ಮುಂದೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಆಳಂದ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.</p>.<p>‘ಮಹಾತ್ಮಗಾಂಧೀಜಿ ಅವರ ಹೆಸರು ಅಳಿಸಿ ಹಾಕಲು ಪಣತೊಟ್ಟಿರುವ ಬಿಜೆಪಿ ಸರ್ಕಾರವು ಅಭಿವೃದ್ಧಿಯಲ್ಲಿಯೂ ರಾಮನ ಜಪ ಮಾಡುತ್ತಿದೆ, ನರೇಗಾ ಯೋಜನೆಯನ್ನೆ ಮುಂದುವರಿಸಬೇಕು, ಪ್ರತಿಯೊಬ್ಬರಿಗೂ 200 ದಿನ ಉದ್ಯೋಗ ನೀಡುವ ಜತೆಗೆ ₹700 ಉದ್ಯೋಗದ ಕೂಲಿ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.</p>.<p>‘ಆಳಂದ ತಾಲ್ಲೂಕಿನ ಕೆಲ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿದರೂ ಉದ್ಯೋಗ ನೀಡುತ್ತಿಲ್ಲ, ತಕ್ಷಣ ಉದ್ಯೋಗ ಖಾತರಿ ಕಾಮಗಾರಿ ಕೈಗೊಳ್ಳಬೇಕು, ಕೂಲಿಕಾರ್ಮಿಕರ ಜತೆ ಬೇಜವಾಬ್ದಾರಿಯಿಂದ ವರ್ತಿಸಿದ ಮೋಘಾ(ಕೆ) ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<p>ಡಿವೈಎಫ್ ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್ , ಹೋರಾಟಗಾರರಾದ ಸಲ್ಮಾನ್ ಖಾನ್ , ಮಲ್ಲಮ್ಮ ಜಿಡಗಾ ಮಾತನಾಡಿದರು.</p>.<p>ಜಿಲ್ಲಾ ಸಂಚಾಲಕ ಪ್ರಮೋಧ ಪಂಚಾಳ, ಮಲ್ಲಿಕಾರ್ಜುನ ಶೃಂಗೇರಿ, ರೂಪದೇವಿ ನಡಗೇರಿ, ಸುಮಂಗಲಾ ಜಿಡಗಾ, ಶರಣಮ್ಮ ಇಕ್ಕಳಕಿ, ಮಲ್ಲಿಕಾರ್ಜುನ ದೇಗಾಂವ, ಅಪ್ಪಾರಾವ ಶೃಂಗೇರಿ ಪಾಲ್ಗೋಂಡಿದರು.</p>.<p>ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಮನವಿ ಸ್ವೀಕರಿಸಿ ಇಕ್ಕಳಕಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಳಂದ:</strong> ‘ರೈತ ಮತ್ತು ಬಡಕೂಲಿಕಾರ್ಮಿಕ ವಿರೋಧಿಯಾದ ವಿಬಿ-ಜಿ ರಾಮ ಜಿ ಮಸೂದೆ ಜಾರಿಗೊಳ್ಳುಸುತ್ತಿರುವ ಕೇಂದ್ರ ಸರ್ಕಾರವು ತಕ್ಷಣ ಈ ಕಾಯಿದೆ ರದ್ದು ಪಡೆಸಬೇಕು’ ಎಂದು ಜನವಾದಿ ಮಹಿಳಾ ಸಂಘಟನೆಯ ಹೋರಾಟಗಾರ್ತಿ ಕೆ.ನೀಲಾ ಒತ್ತಾಯಿಸಿದರು.</p>.<p>ಪಟ್ಟಣದ ತಾಲ್ಲೂಕು ಪಂಚಾಯಿತಿ ಮುಂದೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಆಳಂದ ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಮಾತನಾಡಿದರು.</p>.<p>‘ಮಹಾತ್ಮಗಾಂಧೀಜಿ ಅವರ ಹೆಸರು ಅಳಿಸಿ ಹಾಕಲು ಪಣತೊಟ್ಟಿರುವ ಬಿಜೆಪಿ ಸರ್ಕಾರವು ಅಭಿವೃದ್ಧಿಯಲ್ಲಿಯೂ ರಾಮನ ಜಪ ಮಾಡುತ್ತಿದೆ, ನರೇಗಾ ಯೋಜನೆಯನ್ನೆ ಮುಂದುವರಿಸಬೇಕು, ಪ್ರತಿಯೊಬ್ಬರಿಗೂ 200 ದಿನ ಉದ್ಯೋಗ ನೀಡುವ ಜತೆಗೆ ₹700 ಉದ್ಯೋಗದ ಕೂಲಿ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.</p>.<p>‘ಆಳಂದ ತಾಲ್ಲೂಕಿನ ಕೆಲ ಪಂಚಾಯಿತಿಗಳಲ್ಲಿ ಅರ್ಜಿ ಸಲ್ಲಿಸಿದರೂ ಉದ್ಯೋಗ ನೀಡುತ್ತಿಲ್ಲ, ತಕ್ಷಣ ಉದ್ಯೋಗ ಖಾತರಿ ಕಾಮಗಾರಿ ಕೈಗೊಳ್ಳಬೇಕು, ಕೂಲಿಕಾರ್ಮಿಕರ ಜತೆ ಬೇಜವಾಬ್ದಾರಿಯಿಂದ ವರ್ತಿಸಿದ ಮೋಘಾ(ಕೆ) ಪಿಡಿಒ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<p>ಡಿವೈಎಫ್ ಐ ರಾಜ್ಯಾಧ್ಯಕ್ಷೆ ಲವಿತ್ರ ವಸ್ತ್ರದ್ , ಹೋರಾಟಗಾರರಾದ ಸಲ್ಮಾನ್ ಖಾನ್ , ಮಲ್ಲಮ್ಮ ಜಿಡಗಾ ಮಾತನಾಡಿದರು.</p>.<p>ಜಿಲ್ಲಾ ಸಂಚಾಲಕ ಪ್ರಮೋಧ ಪಂಚಾಳ, ಮಲ್ಲಿಕಾರ್ಜುನ ಶೃಂಗೇರಿ, ರೂಪದೇವಿ ನಡಗೇರಿ, ಸುಮಂಗಲಾ ಜಿಡಗಾ, ಶರಣಮ್ಮ ಇಕ್ಕಳಕಿ, ಮಲ್ಲಿಕಾರ್ಜುನ ದೇಗಾಂವ, ಅಪ್ಪಾರಾವ ಶೃಂಗೇರಿ ಪಾಲ್ಗೋಂಡಿದರು.</p>.<p>ತಾಪಂ ಇಒ ಮಾನಪ್ಪ ಕಟ್ಟಿಮನಿ ಅವರು ಮನವಿ ಸ್ವೀಕರಿಸಿ ಇಕ್ಕಳಕಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>