ಅಧ್ಯಯನ ಕೇಂದ್ರ ಡಿಪ್ಲೊಮಾ ಕೋರ್ಸ್ ಸ್ಥಾಪನೆಗೆ ಚಿಂತನೆ
‘ರಾಜ್ಯದ ಬೇರೆ ಕಡೆಗಳಲ್ಲಿನ ತಾಳೆಗರಿ ಮತ್ತು ಕಾಗದ ಹಸ್ತಪ್ರತಿಗಳನ್ನು ಅಧ್ಯಯನ ಮಾಡಿ ಗುಲಬರ್ಗಾ ವಿವಿಯಲ್ಲಿ ಅಧ್ಯಯನ ಕೇಂದ್ರ ಹಾಗೂ ಡಿಪ್ಲೊಮಾ ಕೋರ್ಸ್ ಸ್ಥಾಪಿಸುವ ಚಿಂತನೆ ಇದೆ’ ಎಂದು ವಿವಿಯ ಕುಲಪತಿ ಪ್ರೊ. ದಯಾನಂದ ಅಗಸರ ‘ಪ್ರಜಾವಾಣಿ’ಗೆ ತಿಳಿಸಿದರು. ‘ನಮ್ಮ ಭಾಗದಲ್ಲಿ ಸಿಕ್ಕಂತಹ ಬಸವ ಪುರಾಣ ಶರಣ ಸಾಹಿತ್ಯ ವಚನ ಸಾಹಿತ್ಯದ ಹಸ್ತಪ್ರತಿಗಳಲ್ಲಿ ಹಾಗೂ ಬೇರೆ ಕಡೆ ಲಭ್ಯವಾದ ಹಸ್ತಪ್ರತಿಗಳಲ್ಲಿ ಏನೆಲ್ಲಾ ವತ್ಯಾಸ ಹೊಸತನ ಇದೆ ಎಂಬುದರ ಅಧ್ಯಯನ ಸಂಶೋಧನೆಗಳು ನಡೆಯಬೇಕು. ಜತೆಗೆ ಹಸ್ತಪ್ರತಿಗಳನ್ನು ಉಳಿಸಿ ಬೆಳೆಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಿ ಓದುವಂತೆ ಮಾಡಲು ಡಿಪ್ಲೊಮಾ ಕೋರ್ಸ್ ಆರಂಭಿಸಲಾಗುವುದು. ಇದಕ್ಕಾಗಿ ಅನುದಾನ ನೀಡುವಂತೆ ಕೆಕೆಆರ್ಡಿಬಿಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದರು. ‘ಹಸ್ತಪ್ರತಿಗಳ ಭಂಡಾರಕ್ಕಾಗಿ ಪ್ರತ್ಯೇಕ ಜಾಗ ಗುರುತಿಸಿ ಸಂರಕ್ಷಣೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು’ ಎಂದು ತಿಳಿಸಿದರು.