ಫ.ಗು. ಹಳಕಟ್ಟಿ ಜಯಂತಿ ಪ್ರಯುಕ್ತ ನಿವೃತ್ತ ಪ್ರಾಧ್ಯಾಪಕಿ ಜಯಶ್ರೀ ದಂಡೆ ಮಾತನಾಡಿ, ‘ವಚನ ಸಾಹಿತ್ಯಕ್ಕೆ ಫ.ಗು. ಹಳಕಟ್ಟಿಯವರ ಕೊಡುಗೆ ಅಪಾರ. ಹಳಕಟ್ಟಿಯವರು ವಚನ ಸಾಹಿತ್ಯ ಶೋಧನೆ ಪ್ರಚಾರಕ್ಕೆ ತರದಿದ್ದರೆ, ವಚನಗಳು ಓದಲು ಸಿಗುವುದೇ ವಿರಳವಾಗುತ್ತಿತ್ತು. ಬಿಎಲ್ಡಿ ಸಂಸ್ಥೆ ಹುಟ್ಟು ಹಾಕಿದ ಕ್ರಾಂತಿ ಹಳಕಟ್ಟಿ ಅವರಿಗೆ ಸಲ್ಲುತ್ತದೆ. ‘ಶಿವಾನುಭವ’ ಪತ್ರಿಕೆ ಆರಂಭಿಸಿದ ಅವರು ಬಡತನ ಲೆಕ್ಕಿಸದೇ ವಚನಗಳನ್ನು ಜನಮಾನಸಕ್ಕೆ ತಲುಪಿಸಲು ಪ್ರಯತ್ನಿಸಿದರು. ವಚನ ಪಿತಾಮಹ ಎಂಬ ಬಿರುದು ಪಡೆದರು’ ಎಂದರು.