ಮುನ್ನೋಳ್ಳಿಯ ನಿವಾಸಿ ಹೀರಾಲಾಲ್ ಹುಸ್ಮಾನಸಾಬ ನದಾಫ್ (38)ಮೃತರು. ಮೇ 24ರಂದು ಗ್ರಾಮದ ಹೊರವಲಯದ ವೈನ್ಶಾಪ್ ಮುಂದೆ ಆರೋಪಿಗಳಾದ ರವಿ ಜಾನೆ, ಶೇಖರ್ ಜಾನೆ ಜತೆಗೆ ಗಲಾಟೆ ನಡೆದಿದೆ. ಈ ಘಟನೆಯಲ್ಲಿ ಕಲ್ಲು, ಬಡಿಗೆಯಿಂದ ಹಲ್ಲೆ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಕಲಬುರಗಿ ಆಸ್ಪತ್ರೆಯಲ್ಲಿ ಹೀರಾಲಾಲ್ ಚಿಕಿತ್ಸೆ ಪಡೆಯುತ್ತಿದ್ದರು.
ಈತನ ಪತ್ನಿ ನೂರಜಾಬಿ ನರೋಣಾ ಪೊಲೀಸ್ ಠಾಣೆಯಲ್ಲಿ ಕೊಲೆ ದೂರು ದಾಖಲಿಸಿದ್ದಾರೆ. ಅನೈತಿಕ ಸಂಬಂಧ ಕಾರಣ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.