ಆಳಂದ: ಪಟ್ಟಣದ ಸಂಬುದ್ಧ ಪದವಿ ಕಾಲೇಜಿನ ವಿದ್ಯಾರ್ಥಿನಿ ಭಾಗ್ಯಶ್ರೀ ಬಸವರಾಜ ಗುಡ್ಡದ ಅವರು ಕಲಬುರ್ಗಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ವಿಜೇತಳಾಗಿ ಒಡಿಶಾದಲ್ಲಿ ನಡೆಯುವ ಅಂತರ್ ರಾಜ್ಯಮಟ್ಟದ ವಿಶ್ವ ವಿದ್ಯಾಲಯಗಳ ಯೋಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಡಾ.ಶಿವಾನಂದ ಹತ್ತಿ ತಿಳಿಸಿದ್ದಾರೆ.