<p><strong>ಜೇವರ್ಗಿ: </strong>ತಾಲ್ಲೂಕಿನ ರಾಸಣಗಿ ಗ್ರಾಮದ ಬಲಭೀಮಸೇನ್ ದೇವರ ಛಟ್ಟಿ ಉತ್ಸವ ಮಂಗಳವಾರ (ಡಿ.7)ರಿಂದ 9ರ ವರೆಗೆ ಜರುಗಲಿದೆ.</p>.<p>ಛಟ್ಟಿ ಉತ್ಸವದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಭೀಮಾ ನದಿ ತೀರದಲ್ಲಿ ಗಂಗಾಸ್ನಾನ ನಡೆಯಲಿದೆ. ಕಟ್ಟಿಹೊಳೆ ಜಟ್ಟಿಂಗರಾಯನಿಗೆ ವಿಶೇಷ ಪೂಜೆ, ಅಭಿಷೇಕ ಸಹ ಜರುಗುವುದು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು.</p>.<p>ಸಂಜೆ 4ಕ್ಕೆ ಕಟ್ಟಿಹೊಳೆ ಜಟ್ಟಿಂಗರಾಯ ದೇವಸ್ಥಾನದಿಂದಬಲಭೀಮಸೇನ್ ದೇವರ ಪಲ್ಲಕ್ಕಿ ಉತ್ಸವ ಹೊರಟು ದೇವಸ್ಥಾನ ತಲುಪಲಿದೆ. ಶಂಕರಗೌಡ ಪಾಟೀಲ, ಶಿವಶಂಕರಯ್ಯ ಮಠ, ಬಿ.ಜಿ.ಪಾಟೀಲ, ಎಸ್.ಡಿ.ಪಾಟೀಲ ಅವರಿಂದ ಅನ್ನ ಸಂತರ್ಪಣೆ ನಡೆಯಲಿದೆ.</p>.<p>ಡಿ.8ರಂದು ಬೆಳಿಗ್ಗೆ 8ಕ್ಕೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುವವವು. ಬೆಳಿಗ್ಗೆ 11ಕ್ಕೆ ರಥೋತ್ಸವ ಜರುಗಲಿದೆ. ರಾತ್ರಿ 9 ಗಂಟೆಯ ಪಲ್ಲಕ್ಕಿ ಸೇವೆಯಲ್ಲಿ ಗುರುರಾಜ ಹೇರೂರ ನೆಲೋಗಿ ತಂಡದವರು ಭಜನೆ ಕಾರ್ಯಕ್ರಮ ನಡೆಸಿಕೊಡುವರು.</p>.<p>ಅನೀಲಕುಮಾರ ವಿಠಲಾಚಾರ್ಯ ಇನಾಮದಾರ್ ಹರವಾಳ ಹಾಗೂ ಅಂಜನಿಕುಮಾರ ಜೆ. ಹರವಾಳಕರ್ ಮತ್ತು ಸಹೋದರರಿಂದ ಅನ್ನಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಸಣಗಿ ಬಲಭೀಮಸೇನ್ ದೇವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ಕೋರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೇವರ್ಗಿ: </strong>ತಾಲ್ಲೂಕಿನ ರಾಸಣಗಿ ಗ್ರಾಮದ ಬಲಭೀಮಸೇನ್ ದೇವರ ಛಟ್ಟಿ ಉತ್ಸವ ಮಂಗಳವಾರ (ಡಿ.7)ರಿಂದ 9ರ ವರೆಗೆ ಜರುಗಲಿದೆ.</p>.<p>ಛಟ್ಟಿ ಉತ್ಸವದ ಪ್ರಯುಕ್ತ ಮಂಗಳವಾರ ಬೆಳಿಗ್ಗೆ ಭೀಮಾ ನದಿ ತೀರದಲ್ಲಿ ಗಂಗಾಸ್ನಾನ ನಡೆಯಲಿದೆ. ಕಟ್ಟಿಹೊಳೆ ಜಟ್ಟಿಂಗರಾಯನಿಗೆ ವಿಶೇಷ ಪೂಜೆ, ಅಭಿಷೇಕ ಸಹ ಜರುಗುವುದು. ನಂತರ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುವುದು.</p>.<p>ಸಂಜೆ 4ಕ್ಕೆ ಕಟ್ಟಿಹೊಳೆ ಜಟ್ಟಿಂಗರಾಯ ದೇವಸ್ಥಾನದಿಂದಬಲಭೀಮಸೇನ್ ದೇವರ ಪಲ್ಲಕ್ಕಿ ಉತ್ಸವ ಹೊರಟು ದೇವಸ್ಥಾನ ತಲುಪಲಿದೆ. ಶಂಕರಗೌಡ ಪಾಟೀಲ, ಶಿವಶಂಕರಯ್ಯ ಮಠ, ಬಿ.ಜಿ.ಪಾಟೀಲ, ಎಸ್.ಡಿ.ಪಾಟೀಲ ಅವರಿಂದ ಅನ್ನ ಸಂತರ್ಪಣೆ ನಡೆಯಲಿದೆ.</p>.<p>ಡಿ.8ರಂದು ಬೆಳಿಗ್ಗೆ 8ಕ್ಕೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುವವವು. ಬೆಳಿಗ್ಗೆ 11ಕ್ಕೆ ರಥೋತ್ಸವ ಜರುಗಲಿದೆ. ರಾತ್ರಿ 9 ಗಂಟೆಯ ಪಲ್ಲಕ್ಕಿ ಸೇವೆಯಲ್ಲಿ ಗುರುರಾಜ ಹೇರೂರ ನೆಲೋಗಿ ತಂಡದವರು ಭಜನೆ ಕಾರ್ಯಕ್ರಮ ನಡೆಸಿಕೊಡುವರು.</p>.<p>ಅನೀಲಕುಮಾರ ವಿಠಲಾಚಾರ್ಯ ಇನಾಮದಾರ್ ಹರವಾಳ ಹಾಗೂ ಅಂಜನಿಕುಮಾರ ಜೆ. ಹರವಾಳಕರ್ ಮತ್ತು ಸಹೋದರರಿಂದ ಅನ್ನಸಂತರ್ಪಣೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ರಾಸಣಗಿ ಬಲಭೀಮಸೇನ್ ದೇವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ಕೋರಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>