ಕಲಬುರ್ಗಿ: ಚೆನ್ನೈನ ಕಾಟನಕುಲತ್ತು ಎಸ್ಆರ್ಎಂ ವಿಶ್ವವಿದ್ಯಾಲಯದಲ್ಲಿ ಡಿ.12ರಿಂದ 16ರ ವರೆಗೆ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಬಾಲ್ ಬ್ಯಾಡ್ಮಿಂಟ್ (ಪುರುಷ) ಟೂರ್ನಿಯಲ್ಲಿಗುಲಬರ್ಗಾ ವಿಶ್ವವಿದ್ಯಾಲಯದ ತಂಡ ಪಾಲ್ಗೊಳ್ಳಲಿದೆ.
ತಂಡದ ನಾಯಕರಾಗಿ ಅಮರೇಶ ಎ.ನಾಯಕ, ಸದಸ್ಯರಾಗಿ ರಾಮಾಂಜನೇಯ, ಇಬ್ರಾಹಿಂಸಾಬ, ರಾಘವೇಂದ್ರ, ಅಮರೇಶ, ಅಭಿಲಾಷ್ ಎಲ್., ಅಭಿಲಾಷ ಎಂ., ಪ್ರಾಣೇಶ ಕೆ. ಭಾಗವಹಿಸುವರು. ಸುರಪುರದ ಜೆ.ಎಂ.ಬೊಹರಾ ಕಾಲೇಜಿನ ದೈಹಿಕ ಶಿಕ್ಷಣ ಬೋಧಕ ರಮೇಶ ಎಸ್. ಅವರು ತಂಡದ ವ್ಯವಸ್ಥಾಪಕ/ ತರಬೇತುದಾರರಾಗಿ ಕಾರ್ಯ ನಿರ್ವಹಿಸುವರು.