ಕಮಲಾಪುರ (ಕಲಬುರ್ಗಿ ಜಿಲ್ಲೆ): ಜನಾಶೀರ್ವಾದ ಯಾತ್ರೆ ನಿಮಿತ್ತ ಬೆಳಿಗ್ಗೆಯೇ ಕಮಲಾಪುರಕ್ಕೆ ಬರಬೇಕಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಸಂಜೆ 5 ಗಂಟೆಯಾದರೂ ಗಂಟೆಯಾದರೂ ಬಾರದಿರುವುದರಿಂದರ ಕಾರ್ಯಕರ್ತರು ಕಾದು ಕಾದು ಸುಸ್ತಾದರು.
ಕಲಬುರ್ಗಿ ಗಡಿ ಗ್ರಾಮ ಕಿಣ್ಣಿ ಸಡಕ್ ಬಳಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿದ್ದರು. ಅಲ್ಲಿಂದ ಕಮಲಾಪುರ ಬಿಜೆಪಿ ಕಚೇರಿವರೆಗೆ ಮೆರವಣಿಗೆ ಹಾಗೂ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಜೆ 5ಕ್ಕೆ ಮಳೆ ಸುರಿಯಲಾರಂಭಿಸಿತು. ಹೀಗಾಗಿ ಅಲ್ಲಿಂದ ಹಲವು ಕಾರ್ಯಕರ್ತರು ತೆರಳಿದರು.