<p><strong>ಶಹಾಬಾದ್:</strong> ‘ಪ್ರಾಚೀನ ಸಮಸ್ತ ಕನ್ನಡಿಗರ ಸಾಧನೆಗಳನ್ನು ಪ್ರತಿಪಾದಿಸುವ ಭಂಕೂರ ಗ್ರಾಮದ ಐತಿಹಾಸಿಕ ಸ್ಮಾರಕಗಳು, ವೀರಗಲ್ಲುಗಳು, ಶಿಲ್ಪ ಕಲೆಗಳು, ಶಾಸನಗಳು ಸಾವಿರಾರು ವರ್ಷದ ರೋಚಕ ಇತಿಹಾಸವನ್ನು ಸಾರುತ್ತವೆ’ ಎಂದು ಸಂಶೋಧಕ, ಸಾಹಿತಿ ಮುಡುಬಿ ಗುಂಡೇರಾವ ಹೇಳಿದರು.</p>.<p>ತಾಲ್ಲೂಕಿನ ಭಂಕೂರ ಗ್ರಾಮದ ಜೈನ ಶಾಂತಿನಾಥ ತೀರ್ಥಂಕರ ಮಂದಿರಕ್ಕೆ ಅವರು ಇತ್ತಿಚೆಗೆ ಭೇಟಿ ನೀಡಿ ಮಾತನಾಡಿದರು.</p>.<p>ಭಂಕೂರಿನಲ್ಲಿ ದೊರೆಯುವ ಜೈನ ಬಸದಿ, ಉದ್ಭವ ಗಣೇಶ, ವೀರಗಲ್ಲು, ಮಹಾಸತಿ ಗಲ್ಲುಗಳು, ರಾಮಲಿಂಗೇಶ್ವರ ದೇವಸ್ಥಾನ ಪ್ರಾಚೀನ ಕಾಲದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಇತಿಹಾಸವನ್ನು ಸಾರುತ್ತವೆ. ರಾಷ್ಟ್ರಕೂಟರ, ಕಲ್ಯಾಣ ಚಾಲುಕ್ಯರು ಈ ಗ್ರಾಮವನ್ನು ಆಳಿದ್ದಾರೆ ಎನ್ನುವುದಕ್ಕೆ ಇಲ್ಲಿಯ ಸ್ಮಾರಕಗಳೇ ಸಾಕ್ಷಿಯಾಗಿವೆ ಎಂದರು .</p>.<p>ಬಸವ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿದರು. ಶಿವಯೋಗೆಪ್ಪಾ ಎಸ್.ಬಿರಾದಾರ, ಭಂಕೂರಿನ ಕರ್ನಾಟಕ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ ಶಶಿಕಾಂತ ಮಡಿವಾಳ, ಪ್ರಮುಖರಾದ ಚನ್ನಪ್ಪಗೌಡ್ ಘಟ್ಟದ್, ಶೀತಲನಾಥ ಜೈನ್, ಶಾಂತಿಪ್ರಸಾದ, ಮಹಾವೀರ ಬಸ್ಮೆ, ಪಲ್ಲವಿ, ಸನ್ಮತಿ, ಪ್ರಮೋದ ಸೇರಿ ಇನ್ನಿತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಹಾಬಾದ್:</strong> ‘ಪ್ರಾಚೀನ ಸಮಸ್ತ ಕನ್ನಡಿಗರ ಸಾಧನೆಗಳನ್ನು ಪ್ರತಿಪಾದಿಸುವ ಭಂಕೂರ ಗ್ರಾಮದ ಐತಿಹಾಸಿಕ ಸ್ಮಾರಕಗಳು, ವೀರಗಲ್ಲುಗಳು, ಶಿಲ್ಪ ಕಲೆಗಳು, ಶಾಸನಗಳು ಸಾವಿರಾರು ವರ್ಷದ ರೋಚಕ ಇತಿಹಾಸವನ್ನು ಸಾರುತ್ತವೆ’ ಎಂದು ಸಂಶೋಧಕ, ಸಾಹಿತಿ ಮುಡುಬಿ ಗುಂಡೇರಾವ ಹೇಳಿದರು.</p>.<p>ತಾಲ್ಲೂಕಿನ ಭಂಕೂರ ಗ್ರಾಮದ ಜೈನ ಶಾಂತಿನಾಥ ತೀರ್ಥಂಕರ ಮಂದಿರಕ್ಕೆ ಅವರು ಇತ್ತಿಚೆಗೆ ಭೇಟಿ ನೀಡಿ ಮಾತನಾಡಿದರು.</p>.<p>ಭಂಕೂರಿನಲ್ಲಿ ದೊರೆಯುವ ಜೈನ ಬಸದಿ, ಉದ್ಭವ ಗಣೇಶ, ವೀರಗಲ್ಲು, ಮಹಾಸತಿ ಗಲ್ಲುಗಳು, ರಾಮಲಿಂಗೇಶ್ವರ ದೇವಸ್ಥಾನ ಪ್ರಾಚೀನ ಕಾಲದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಆಧ್ಯಾತ್ಮಿಕ ಇತಿಹಾಸವನ್ನು ಸಾರುತ್ತವೆ. ರಾಷ್ಟ್ರಕೂಟರ, ಕಲ್ಯಾಣ ಚಾಲುಕ್ಯರು ಈ ಗ್ರಾಮವನ್ನು ಆಳಿದ್ದಾರೆ ಎನ್ನುವುದಕ್ಕೆ ಇಲ್ಲಿಯ ಸ್ಮಾರಕಗಳೇ ಸಾಕ್ಷಿಯಾಗಿವೆ ಎಂದರು .</p>.<p>ಬಸವ ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿದರು. ಶಿವಯೋಗೆಪ್ಪಾ ಎಸ್.ಬಿರಾದಾರ, ಭಂಕೂರಿನ ಕರ್ನಾಟಕ ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕ ಶಶಿಕಾಂತ ಮಡಿವಾಳ, ಪ್ರಮುಖರಾದ ಚನ್ನಪ್ಪಗೌಡ್ ಘಟ್ಟದ್, ಶೀತಲನಾಥ ಜೈನ್, ಶಾಂತಿಪ್ರಸಾದ, ಮಹಾವೀರ ಬಸ್ಮೆ, ಪಲ್ಲವಿ, ಸನ್ಮತಿ, ಪ್ರಮೋದ ಸೇರಿ ಇನ್ನಿತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>