ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್‌ಗಳ ಮುಖಾಮುಖಿ ಡಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಸವಾರ ಅಮರ್‌ಗೆ ಗಾಯ, ಹೆಲ್ಮೆಟ್‌ ಹಾಕಿದ್ದರಿಂದ ಪಾರು
Last Updated 17 ಜುಲೈ 2022, 2:24 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ಶಿರೋಳ್ಳಿ–ಹೂವಿನಹಳ್ಳಿ ಮಾರ್ಗದ ರಾಜ್ಯ ಹೆದ್ದಾರಿ 15ರಲ್ಲಿ ಶನಿವಾರ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಬ್ಬ ಗಾಯಗೊಂಡಿದ್ದಾನೆ.

ಶಿರೋಳ್ಳಿಯ ಜಗನ್ನಾಥ ರಾವಲಪ್ಪ ತಳವಾರ (35), ಮಹಿಬೂಬಸಾಬ್‌ ಇಬ್ರಾಹಿಂಸಾಬ್‌ ಬುರ್ಲಿ(50) ಹಾಗೂ ಶಾದಿಪುರದ ಶ್ರೀಕಾಂತ ವಿಶ್ವನಾಥ ವೀರಣ್ಣೋರ ಮೃತಪಟ್ಟವರು. ಇನ್ನೋರ್ವ ಬೈಕ್ ಸವಾರ ಅಮರ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಲೇಪೇಟ ಠಾಣೆಗೆ ಅರ್ಜಿ ಕೊಡುವುದಕ್ಕಾಗಿ ಬೈಕ್ ಮೇಲೆ ಶಿರೋಳ್ಳಿಯಿಂದ ಜಗನ್ನಾಥ ಮತ್ತು ಮಹಿಬೂಬ ಅಲಿ ಬರುತ್ತಿದ್ದರು. ಇದೇ ವೇಳೆಗೆ ಚಿಂಚೋಳಿಯಿಂದ ಸೇಡಂ ಕಡೆಗೆ ಶಾದಿಪುರದ ಶ್ರೀಕಾಂತ ಮತ್ತು ಅಮರ ಇಬ್ಬರು ಬೈಕ್‌ನಲ್ಲಿ ತೆರಳು ತ್ತಿದ್ದರು. ಶಿರೋಳ್ಳಿ ಹಾಗೂ ಹೂವಿ ನಹಳ್ಳಿ ಮಾರ್ಗ ದಲ್ಲಿ ಮುಂದೆ ಹೋಗು ತ್ತಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ 2 ಬೈಕ್‌ಗಳು ಮುಖಾಮುಖಿ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ಸ್ಥಳದಲ್ಲಿಯೇ ಮೃತಪಟ್ಟರೆ, ಗಾಯಾಳು ಅಮರ ಸಹ ಸವಾರರಾಗಿ ಹಿಂಬದಿಯಲ್ಲಿ ಕುಳಿತಿದ್ದರೂ ಹೆಲ್ಮೆಟ್ ಧರಿಸಿದ್ದ. ಹೀಗಾಗಿ ಅಮರ, ಬದುಕುಳಿದಿದ್ದು, ಕೈ ಮತ್ತು ಕಾಲು ಮುರಿದಿವೆ. ಶಸ್ತ್ರಚಿಕಿತ್ಸೆ ನಡೆಸಬೇಕಿದೆ ಎಂದು ಅಮರ ಕುಟುಂಬದ ಮೂಲಗಳು ತಿಳಿಸಿವೆ.

ಶಾದಿಪುರದ ಅಮರ ಅಶೋಕ ಪ್ರಾಂಜೆ ಅವರು ಪರಪ್ಪನ ಅಗ್ರಹಾರದಲ್ಲಿ ಜೈಲರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಈಚೆಗೆ ಪ್ರಥಮ ದರ್ಜೆ ಸಹಾಯಕರಾಗಿ ನೇಮಕಗೊಂಡಿದ್ದರಿಂದ ಸಿಂಧುತ್ವಕ್ಕಾಗಿ ಸೇಡಂಗೆ ತೆರಳುವಾಗ ಘಟನೆ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಸಿಪಿಐ ಕೆ.ಜಿ. ಜಗದೀಶ, ಎಸ್‌ಐ ಸುಖಾನಂದ ಸಿಂಗೆ ಭೇಟಿ ನೀಡಿ ಪರಿಶೀಲಿಸಿದರು. ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT