ವಾಡಿ: ತಾಲ್ಲೂಕಿನಸನ್ನತಿ ಸಮೀಪದ ಕನಗನಹಳ್ಳಿ ಬಳಿ ಭಾನುವಾರ ಸಂಜೆ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರೂ ಸವಾರರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಾಲಕಿ ಸೇರಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ
ಇಂಗಳಗಿಯ ರವಿ ಕಲಬುರ್ಗಿ (35) ಹಾಗೂ ಕೊಲ್ಲೂರು ನಿವಾಸಿ ಶಂಕರಗೌಡ ಹಾದಿಮನಿ (26) ಮೃತಪಟ್ಟಿದ್ದಾರೆ. ರವಿ ಅವರು ಇಂಗಳಗಿಯಿಂದ ತಮ್ಮ ಪತ್ನಿ ಮತ್ತು ಮಗಳ ಸಮೇತ ಬೈಕ್ನಲ್ಲಿ ಇಬ್ರಾಹಿಂಪುರ ಗ್ರಾಮಕ್ಕೆ ತೆರಳುತ್ತಿದ್ದರು. ಇದೇ ವೇಳೆ ಎದುರಿಗೆ ಬರುತ್ತಿದ್ದ ಶಂಕರಗೌಡ ಅವರ ಬೈಕ್ ಡಿಕ್ಕಿ ಹೊಡೆದಿದೆ.
ಘಟನೆಯಲ್ಲಿ ಮೃತ ರವಿ ಅವರ ಪತ್ನಿ ಶಿವಲೀಲಾ ಹಾಗೂ ಮಗಳು ವೈಷ್ಣವಿಗೆ ಗಂಭೀರ ಗಾಯಗಳಾಗಿದ್ದು, ಕಲಬುರ್ಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.