ದಲಿತ ಸೇನೆ ಕರ್ನಾಟಕ ತಾಲ್ಲೂಕು ಘಟಕದ ಅಧ್ಯಕ್ಷ ಬಂಡಪ್ಪ ಯಂಗೆನೋರ ಹಾಗೂ ಸಾಸರಗಾಂವ ತಾಂಡಾದ ಜೆಸಿಬಿ ಆಪರೇಟರ್ ಕೆಲಸ ಮಾಡುವ ಧೋಳ್ಯಾ ನರಸಿಂಗ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಂಡಪ್ಪನವರ ಕಾಲು ಮುರಿದಿದೆ. ಜತೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಧೋಳ್ಯಾ ಎದೆಗೆ ಭಾರಿ ಪೆಟ್ಟಾಗಿದ್ದು ಅವರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಇಬ್ಬರನ್ನೂ ಪ್ರತ್ಯೇಕ ಆ್ಯಂಬುಲೆನ್ಸ್ ನಲ್ಲಿ ಕಲಬುರ್ಗಿಗೆ ಕರೆದೊಯ್ಯಲಾಗಿದೆ.