ಕಲಬುರಗಿ: ನಗರದ ನಾಗನಹಳ್ಳಿ ಕ್ರಾಸ್ನಿಂದ ರಾಮಮಂದಿರ ವೃತ್ತಕ್ಕೆ ಬರುವ ರಿಂಗ್ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ಬಸ್, ಕಾರು ಹಾಗೂ ಬೈಕ್ ಮಧ್ಯದ ಡಿಕ್ಕಿಯಲ್ಲಿ ಬೈಕ್ ಸವಾರ ಅನುರೂಪ್ ನಿಂಬರ್ಗಾ (22) ಎಂಬುವವರ ಕಾಲಿನ ಮೂಳೆಗೆ ಗಾಯವಾಗಿದೆ.
ಎದುರಿನಿಂದ ಬಂದ ಕಾರನ್ನು ತಪ್ಪಿಸಲು ಮತ್ತೊಂದು ಕಾರು ಬ್ರೇಕ್ ಹಾಕಿದಾಗ ಅದರ ಹಿಂದಿದ್ದ ಬೈಕ್ ಸವಾರನಿಗೆ ಹಿಂದಿನಿಂದ ಬಂದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆಯಿತು. ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಮುಂದಕ್ಕೆ ಸರಿದು ಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.