ಅಫಜಲಪುರ: ತಾಲ್ಲೂಕಿನ ಅಫಜಲಪುರ–ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಮಾ ಏತ ನೀರಾವರಿ ಕಚೇರಿ ಸಮೀಪ ಶನಿವಾರ ಸಂಜೆ ಟಿಪ್ಪರ್–ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಜೇವರ್ಗಿ (ಕೆ) ಗ್ರಾಮದ ಇಸ್ಮಾಯಿಲ್ ಸಾಬ್ ಗುಲಾಬ ಸಾಬ್ ಗೊಳ್ಳೊಳ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಲಬುರಗಿಯಿಂದ ಆಫಜಲಪುರಕ್ಕೆ ವಾಪಸಾಗುತ್ತಿದ್ದ ಇಸ್ಮಾಯಿಲ್ಸಾಬ್ ಅವರು ಎದುರಿಗೆ ನಿಂತಿದ್ದ ಟಿಪ್ಪರ್ಗೆ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟರು. ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.