‘ನನ್ನ ಅಧಿಕಾರದ ಅವಧಿಯಲ್ಲಿ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗಲು ಕೃಷಿ ಬೆಲೆ ಆಯೋಗ ರಚಿಸಲಾಗಿತ್ತು. ಈಗ ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸಕ್ಕರೆ ದರ ಕುಸಿದಾಗ ಕಬ್ಬು ಬೆಳೆಗಾರರಿಗೆ ₹ 1,800 ಕೋಟಿ ನೀಡಿದ್ದೆ. ಸಹಕಾರಿ ಸಂಘಗಳಲ್ಲಿ ಪಡೆದಿದ್ದ ಪ್ರತಿ ರೈತರ ₹ 50 ಸಾವಿರ ಸಾಲವನ್ನು ಯಾವುದೇ ಷರತ್ತಿಲ್ಲದೆ ಮನ್ನಾ ಮಾಡಲಾಗಿತ್ತು. ಲೀಟರ್ ಹಾಲಿಗೆ ₹ 5 ಬೆಂಬಲ ಬೆಲೆ ಕೊಟ್ಟು ಹೈನುಗಾರಿಕೆಗೆ ಉತ್ತೇಜನ ನೀಡಲಾಗಿತ್ತು. ಈಗ ಅಂತಹ ಯೋಜನೆಗಳಿಲ್ಲ’ ಎಂದು ಟೀಕಿಸಿದರು.