ರಕ್ತದಾನ ಶಿಬಿರವನ್ನು ತಾಲ್ಲೂಕು ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ಸಂತೋಷ ಪಾಟೀಲ ಉದ್ಘಾಟಿಸಿದರು. ಟಿಎಚ್ಒ ಡಾ. ಮಹಮದ್ ಗಫಾರ, ಕೇತಕಿ ಸಂಗಮೇಶ್ವರ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಬಸವೇಶ ವೈಜನಾಥ ಪಾಟೀಲ, ಸಮಿತಿ ಅಧ್ಯಕ್ಷ ಗೌತಮ ಪಾಟೀಲ, ನಾಗರಾಜ ಮಲಕೂಡ, ನೀಲಕಂಠ ಸೀಳಿನ್, ಶರಣು ಪಾಟೀಲ ಮೋತಕಪಳ್ಳಿ ಇದ್ದರು. ಜಿಮ್ಸ್ ರಕ್ತ ನಿಧಿ ಕೇಂದ್ರದ ಅಧಿಕಾರಿಗಳು ರಕ್ತ ಪಡೆದುಕೊಂಡರು.